ಧಾರವಾಡ prajakiran.com : ಧಾರವಾಡದ ಹಲವು ಬಡಾವಣೆಗಳಲ್ಲಿ ಮತ್ತೇ ಬೀದಿ ನಾಯಿಗಳ ಹಾವಳಿ ಶುರುವಾಗಿದೆ.
ಇದರಿಂದಾಗಿ ಮಕ್ಕಳಿಗೆ ಹಾಗೂ ಪೋಷಕರಿಗೆ ಸಂಕಷ್ಟದ ವಾತಾವರಣ ನಿರ್ಮಾಣವಾಗಿದ್ದು, ಹೊರಗಡೆ ಮಕ್ಕಳನ್ನು ಏಕಾಂಗಿಯಾಗಿ ಕಳುಹಿಸಬೇಕಾದರೆ ಹಲವು ಬಾರಿ ವಿಚಾರ ಮಾಡಬೇಕಿದೆ.
ಧಾರವಾಡದ ಕೆ.ಸಿ. ಪಾರ್ಕ್ ರಸ್ತೆ, ಮಾಳಮಡ್ಡಿ, ಶ್ರೀರಾಮನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಹಿಂಡು ಹಿಂಡಾಗಿ ಸಂಚರಿಸುವ ಬೀದಿ ನಾಯಿಗಳು ಸ್ಥಳೀಯರನ್ನು ಆತಂಕಕ್ಕೆ ದೂಡಿವೆ.
ಒಂದೊಂದು ಬಡಾವಣೆಯಲ್ಲಿ ಕನಿಷ್ಟ ಎನಿಲ್ಲವೆಂದರೂ ನಾಲ್ಕೈದು ನಾಯಿಗಳು ಕಾಣಸಿಗುತ್ತವೆ. ಶ್ರೀರಾಮನಗರದಲ್ಲಿ ಹೆಚ್ಚು ಕಡಿಮೆ 20 ರಿಂದ 30 ನಾಯಿಗಳು ಇವೆ.
ಇದರಿಂದಾಗಿ ಮಕ್ಕಳು, ವೃದ್ದರು, ಮಹಿಳೆಯರು ಅಂಗಡಿ ಮುಂಗಟ್ಟುಗಳಿಗೆ ಹೋಗಲು ಹೆದರುವ ಪರಿಸ್ಥಿತಿ ಬಂದೊದಗಿದೆ ಎಂದು ಲೀಲಾವತಿ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನೂ ಈ ನಾಯಿಗಳಿಂದ ಒಬ್ಬ ವೃದ್ದೆ ಸಹ ಇಲ್ಲಿ ಸಾವನ್ನಪ್ಪಿರೋ ಘಟನೆ ನಡೆದಿದೆ. ಈ ನಾಯಿಗಳು ಚಿಕ್ಕ ಮಕ್ಕಳ ಮೇಲೆ ಹಲ್ಲೆ ಮಾಡಿದ್ರೆ ಮಕ್ಕಳಿಗೆ ಬಿಡಿಸಿಕೊಳ್ಳೋಕ್ಕಾಗಲ್ಲಾ.
ದೊಡ್ಡವರಿದ್ರೆ ಹೇಗಾದ್ರು ಬಚಾವ್ ಆಗ್ಬಹುದು, ಇದರ ಬಗ್ಗೆ ಈಗಾಗಲೇ ಎರಡಮೂರು ಬಾರಿ ಪಾಲಿಕೆ ಅವರಿಗೆ ಫೋನ್ ಮೂಲಕ ಮಾಹಿತಿ ತಿಳಿಸಿದ್ದೇವೆ.
ಆದರೂ ಸಹ ಅವರಿಂದ ಈ ವರೆಗೂ ನಮಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲಾ ಎಂದು ಸ್ಥಳೀಯ ನಿವಾಸಿ ಹಸನ್ ಮೆಣಸಗಿ ದೂರಿದ್ದಾರೆ.
ಇನ್ನೂ ಈ ಬಗ್ಗೆ ಪಾಲಿಕೆ ಅಧಿಕಾರಿಗಳು ಎಚ್ಚೆತ್ತು, ಸ್ಥಳೀಯರ ಸಮಸ್ಯೆಯನ್ನು ಬಗೆ ಹರಿಸಬೇಕಿದೆ.
ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆಯಾದರು ಮಾಡಿ ನಿಯಂತ್ರಿಸಲು ಮುಂದಾಗುವರೇ ಎಂಬುದು ಕಾದು ನೋಡಬೇಕಿದೆ.