ಚಿಕ್ಕೋಡಿ prajakiran.com : ಕೊಲ್ಲಾಪುರದಲ್ಲಿ ಮತ್ತೆ ಶಿವಸೇನೆ ಕಾರ್ಯಕರ್ತರು ಪುಂಡಾಟಿಕೆ ಮುಂದುವರೆಸಿದ್ದಾರೆ.
ಕೊಲ್ಲಾಪೂರದಲ್ಲಿರುವ ಕನ್ನಡಿಗರ ಉಡುಪಿ ಹೋಟೆಲ್ ಬಂದ ಮಾಡಿಸಿದ ಶಿವಸೇನೆ ಕಾರ್ಯಕರ್ತರು ಬಳಿಕ ಶಿವಾಜಿ ಮೂರ್ತಿಗೆ ಹಾಲಿನ ಅಭಿಷೇಕ ಮಾಡಿದರು.
ನೂರಾರು ಶಿವಸೇನೆ ಕಾರ್ಯಕರ್ತರು ಶಿವಾಜಿ ಮೂರ್ತಿ ತೊಳೆದು ಸ್ವಚ್ಚತೆ ಮಾಡಿ ಹಾಲಿನ ಅಭಿಷೇಕ ಮಾಡಿದರು.
ಶಿವಾಜಿ ಮೂರ್ತಿಗೆ ಮಸಿ ಬಳಿದ ಕಿಡಿಗೇಡಿಗಳ ನಡೆ ಖಂಡಿಸಿ ಕನ್ನಡದ ಧ್ವಜ ಸುಟ್ಟು ಹಾಕಿದರು.
ಶಿವಾಜಿ ಮಹಾರಾಜರ ಘೋಷಣೆ ಕೂಗಿ ಕರ್ನಾಟಕದ ವಿರುದ್ದ ಘೋಷಣೆ ಕೂಗಿದರು.
ತಕ್ಷಣವೇ ಶಿವಾಜಿ ಮೂರ್ತಿ ಅಒಮಾನಗೊಳಿಸಿದ ಕಿಡಿಗೇಡಿಗಳನ್ಬು ಬಂಧಿಸುವಂತೆ ಆಗ್ರಹಿಸಿದರು