ಧಾರವಾಡ : ತೀವ್ರ ಕುತೂಹಲ ಕೆರಳಿಸಿದ್ದ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ತಿರಸ್ಕೃತ ಮತಗಳ ಸಂಖ್ಯೆ 8772.
ಹೌದು ಇದು ಅಚ್ಚರಿಯಾದರೂ ಸತ್ಯ. ಪದವೀಧರರ ಹಾಗೂ ಅದರಲ್ಲೂ ಪ್ರಜ್ಞಾವಂತರ ಕ್ಷೇತ್ರ ವಿದ್ಯಾನಗರಿ ಧಾರವಾಡ ಜಿಲ್ಲೆ, ಗದಗ, ಹಾವೇರಿ ಹಾಗೂ ಉತ್ತರಕನ್ನಡ ಜಿಲ್ಲೆಯ ವ್ಯಾಪ್ತಿ ಹೊಂದಿರುವ ಈ ಕ್ಷೇತ್ರದಲ್ಲಿ ಇಷ್ಟೊಂದು ಮತಗಳು ತಿರಸ್ಕೃತಗೊಂಡಿರುವುದು ಸ್ವತಃ ಜಿಲ್ಲೆಯ ಚುನಾವಣಾ ಅಧಿಕಾರಿಗಳನ್ನು ಬೆಚ್ಚಿಬೀಳಿಸಿದೆ.
ಇದಕ್ಕೆ ಕಾರಣ ಹುಡುಕಿದಾಗ ಪದವೀಧರರಅಭ್ಯರ್ಥಿಗಳ ಹೆಸರಿನ ಮುಂದೆ ಅವರ ಸಂಖ್ಯೆಯನ್ನು ನಮೂದಿಸಿದ್ದಾರೆ. ಮೊದಲ, ದ್ವಿತೀಯ ಹಾಗೂ ತೃತೀಯ ಪ್ರಾಶಸ್ತ್ರ್ಯ ನಮೂದಿಸುವ ಬದಲಿಗೆ ಅವರ ಕ್ರಮ ಸಂಖ್ಯೆ ನಮೂದಿಸಿದ್ದಾರೆ.
ಇದು 9 ಸಾವಿರ ಸಮೀಪದ ಮತಗಳು ಅಸಿಂಧುಗೊಳ್ಳಲು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಪಕ್ಷೇತರಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಸವರಾಜ ಗುರಿಕಾರಅವರು ಪಡೆದ ಮತಗಳಿಗಿಂತ ಅಸಿಂಧು ಮತಗಳೇ ಹೆಚ್ಚಾಗಿರುವುದು ಆಘಾತಕಾರಿ ಅಂಶವಾಗಿದ್ದು, ಇದು ಪ್ರಜ್ಞಾವಂತರಿಗೆ ಅದರಲ್ಲೂ ಅಭ್ಯರ್ಥಿಗಳಿಗೆ ಭಾರಿ ಕಳವಳ ಮೂಡಿಸಿದೆ.