ಧಾರವಾಡ prajakiran.com :
ಧಾರವಾಡದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಹಾಡಹಗಲೇ ಅಪಹರಣ ಮಾಡಿದ ಘಟನೆ ವಿದ್ಯಾನಗರಿ ಧಾರವಾಡದಲ್ಲಿ ಶುಕ್ರವಾರ ನಡೆದಿದೆ.
ಇದರಿಂದಾಗಿ ಅವಳಿನಗರದ ಜನತೆ ಕೆಲಕಾಲ ಬೆಚ್ಚಿಬಿದ್ದಿದ್ದರು.
ಆದರೆ ಸಮಾಧಾನದ ಸಂಗತಿಯೆಂದರೆ
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹುಬ್ಬಳ್ಳಿ ಧಾರವಾಡ ಪೊಲೀಸರು ಅಪಹರಿಸಿದ 4 ಗಂಟೆಯಲ್ಲೇ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಶ್ರೀನಿವಾಸ ನಾಯ್ಡು ಅಪಹರಣಕ್ಕೊಳಗಾದ ಉದ್ಯಮಿಯಾಗಿದ್ದು,
ಧಾರವಾಡ ತಾಲೂಕಿನ ದೇವರ ಹುಬ್ಬಳ್ಳಿ ಗ್ರಾಮದ ಬಳಿ ಪತ್ತೆಯಾಗಿದ್ದಾರೆ.
ಪೊಲೀಸ್ ಬೆನ್ನತ್ತಿದ್ದ ಹಿನ್ನೆಲೆಯಲ್ಲಿ
ಉದ್ಯಮಿಯನ್ನು ಅಪಹರಣಕಾರರು ಬಿಟ್ಟು ಹೋಗಿದ್ದಾರೆ.
ಜಮೀನು ನೋಡಲು ಹೋದಾಗ ಈ ಅಪಹರಣ ನಡೆದಿದೆ ಎನ್ನಲಾಗಿದೆ
ಖಾರದ ಪುಡಿ ಎರಚಿ ಅಪಹರಣ ಮಾಡಲಾಗಿದೆ.
ಹೊಲವೊಂದರ ಶೆಡ್ನಲ್ಲಿ ಕೂಡಿ ದುಷ್ಕರ್ಮಿಗಳು ಹಾಕಿದ್ದರು.
ಘಟನೆ ನಡೆದ ತಕ್ಷಣವೇ ಪೊಲೀಸರಿಗೆ ಮಾಹಿತಿ ರವಾನಿಯಾಗಿದೆ
ತಕ್ಷಣ ಕಾರ್ಯಾಚರಣೆಗೆ ಇಳಿದ ಧಾರವಾಡದ ವಿದ್ಯಾಗಿರಿ ಪೊಲೀಸರು ಎಲ್ಲಡೆ ನಾಕಾಬಂದಿ ಮಾಡಿ ಬೆನ್ನಟ್ಟಿದ್ದ ಪರಿಣಾಮ ನಾಲ್ಕೇ ಗಂಟೆಯಲ್ಲಿ ಪ್ರಕರಣ ಸುಖಾಂತ್ಯಗೊಂಡಿದೆ