ಬೆಂಗಳೂರು prajakiran.com : ಯುವತಿಗೆ ಉದ್ಯೋಗ ಆಮಿಷ ಒಡ್ಡಿ ಲೈಂಗಿಕ ಸಂಪರ್ಕ ಹೊಂದಿದ ಆರೋಪ ಎದುರಿಸುತ್ತಿರುವ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಪಕ್ಷಕ್ಕೆ ಮುಜುಗರ ವಾಗಬಾರದು ಎಂದು ಸ್ವಯಂ ಪ್ರೇರಿತರಾಗಿ ರಾಜೀನಾಮೆ ನೀಡಿದ್ದು, ಆರೋಪ ಮುಕ್ತರಾಗಿ ಹೊರಬಂದಬಳಿಕ ಮತ್ತೆ ಸಚಿವ ಸ್ಥಾನ ನೀಡುವಂತೆ ಮುಖ್ಯಮಂತ್ರಿ ಬಿ
ಎಸ್. ಯಡಿಯೂರಪ್ಪ ಅವರಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಬೆಳಗ್ಗೆ ಅಷ್ಟೇ ಅವರ ಸಹೋದರ ಹಾಗೂ ಬಿಜೆಪಿವಶಾಸಕ ಬಾಲಚಂದ್ರ ಜಾರಕಿಹೊಳಿ ಸಿಎಂ ಅವರನ್ನು ಭೇಟಿ ಮಾಡಿ ಬಂದಿದ್ದರು.
ಮಧ್ಯಾಹ್ನ ಒಂದು ಗಂಟೆಗೆ ಸಚಿವರ ರಾಜೀನಾಮೆ ಪತ್ರ ಸಿಎಂ ಕೈ ಸೇರಿದೆ.
ರಾಜೀನಾಮೆ ಯನ್ನು ಸ್ವಾಗತಿಸಿರುವ ಸಾಮಾಜಿಕ ಕಾರ್ಯಕರ್ತ ದಿನೇಶ ಕಲ್ಲಹಳ್ಳಿ ಕೇವಲ ರಾಜೀನಾಮೆ ಸಲ್ಲದು.
ಯುವತಿ ಕುಟುಂಬಕ್ಕೆ ನ್ಯಾಯ ಸಿಗಬೇಕು. ಅಲ್ಲದೆ, ನನಗೆ ಜೀವ ಬೆದರಿಕೆ ಕರೆ ಬರುತ್ತಿವೆ. ಭ್ರಷ್ಟಾಚಾರದ ದಾಖಲೆಯನ್ನು ಶೀಘ್ರವಾಗಿ ಬಿಡುಗಡೆ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ನಿನ್ನೆ ಬೆಂಗಳೂರು ನಗರದ ಪೊಲೀಸ್ ಆಯುಕ್ತರಿಗೆ ದಿನೇಶ ಕಲ್ಲಹಳ್ಳಿ ದೂರು ನೀಡಿದ್ದರು.
ರಮೇಶ ಜಾರಕಿಯವರನ್ನು ಸಚಿವ ಸಂಪುಟದಿಂದ ಕೈ ಬಿಡುವಂತೆ ಒತ್ತಾಯಿಸಿ ರಾಜ್ಯಾದ್ಯಂತ ಕಾಂಗ್ರೆಸ್ ಹಾಗೂ ಜೆಡಿಎಸ್ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಬಿಜೆಪಿ ಸರಕಾರದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಆದರೆ, ಅವರು ನಿನ್ನೆ ವಿಡಿಯೋ ನೋಡಿಲ್ಲ. ರಾಜೀನಾಮೆ ನೀಡಲ್ಲ ಎಂದು ಹೇಳಿದ್ದರು. ಅಲ್ಲದೆ, ಇದು ರಾಜಕೀಯ ಪಿತೂರಿ ಎಂದು ಆರೋಪಿಸಿದ್ದರು. ಅವರು ಬೆಂಬಲಿಗರು ನಿನ್ನೆ ಇದು ಫೇಕ್ ವೀಡಿಯೋ ಎಂದು ಸಿಡಿ ಬಿಡುಗಡೆ ಮಾಡಿದ್ದರು. ಇಂದು ಅವರ ರಾಜೀನಾಮೆ ಪಡೆಯಬಾರದು ಎಂದುಗೋಕಾಕ ತಾಲೂಕಿನಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ.