ರಾಜ್ಯ

ಪತ್ರಕರ್ತನಿಗೆ ಕಿತ್ತೂರ ಪಿಎಸ್ ಐ ಧಮ್ಕಿ…!

ಬೆಳಗಾವಿ prajakiran.com : ಬೆಳಗಾವಿ ಜಿಲ್ಲೆಯ ಎಂ ಕೆ ಹುಬ್ಬಳ್ಳಿಯಲ್ಲಿ ಸೈಕಲ್ ಮೇಲೆ ಶವ ಸಾಗಿಸಿದ ಘಟನೆ ಕುರಿತು ವರದಿ ಮಾಡಿರುವ ಪತ್ರಕರ್ತನಿಗೆ ಕಿತ್ತೂರ ಪಿಎಸ್ ಐ ಕರೆ ಮಾಡಿ ಧಮ್ಕಿ ಹಾಕಿರುವ ಘಟನೆ ನಡೆದಿದೆ.

ಪತ್ರಕರ್ತನಿಗೆ ಧಮ್ಕಿ ಹಾಕಿದ ಕಿತ್ತೂರು ಪಿಎಸ್ಐ ಅವರಿಗೆ ಬೆಳಗಾವಿ ಪ್ರಭಾರಿ ಎಸ್ಪಿ ಅಮರನಾಥ್ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ತೀವ್ರ ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕೊರೋನಾ ಲಕ್ಷಣ ಹಿನ್ನಲೆಯಲ್ಲಿ ಆಸ್ಪತ್ರೆಗೆ ಸಾಗಿಸುವ ಮೊದಲೇ ಮನೆಯಲ್ಲಿ ವೃದ್ಧ ಸಾವನ್ನಪ್ಪಿದರು. 

ಆದರೆ ವ್ಯಕ್ತಿಯ ಶವ ಸಾಗಿಸಲು ಯಾರು ಸಹಾಯಕ್ಕೆ ಬರದ ಕಾರಣ ಸೈಕಲ್ ಮೇಲೆ ವ್ಯಕ್ತಿಯ ಶವ ತೆಗೆದುಕೊಂಡು ಅಂತ್ಯಸಂಸ್ಕಾರ ಮಾಡಿದ ಅಮಾನವೀಯ ಘಟನೆ ನಡೆದಿತ್ತು. ಈ ಕುರಿತು ಸ್ಥಳೀಯವರದಿಗಾರ ವರದಿ ಮಾಡಿದ್ದ.

ಇದನ್ನು ಪ್ರಶ್ನಿಸಿ ಕಿತ್ತೂರ ಪಿಎಸ್ಐ ಪತ್ರಕರ್ತರ ಮೇಲೆ ಧಮ್ಕಿ ಹಾಕಿರುವ ಘಟನೆ ಬೆಳಕಿಗೆಬಂದಿದೆ. ಜೊತೆಗೆ ಗೃಹ ಇಲಾಖೆಯಿಂದ ಕೆಲವರ ಮೇಲೆ ನಿಗಾ ಇಡಲಾಗಿದ್ದು

ನಿಮ್ಮ ಬಗ್ಗೆಯೂ ಮಾಹಿತಿ ನೀಡುವುದಾಗಿ ಅವಾಜ್ ಹಾಕಿದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *