ಗುಜರಾತ್ prajakiran.com : ತೌಕ್ತೆಯ ಅಬ್ಬರಕ್ಕೆ ಗುಜರಾತ್ನಲ್ಲಿ 13 ಮಂದಿ ಮೃತಪಟ್ಟಿದ್ದು, ಪರಿಸ್ಥಿತಿ ಅವಲೋಕಿಸಲು ಇಂದು ಪ್ರಧಾನಿ ಮೋದಿ ಗುಜರಾತ್ಗೆ ಭೇಟಿ ನೀಡಲಿದ್ದಾರೆ.
ದಕ್ಷಿಣ ಕೇರಳ, ಕರ್ನಾಟಕ ಕರಾವಳಿ ಮೂಲಕ ಮಹಾರಾಷ್ಟ್ರ ಪ್ರವೇಶಿಸಿದ ತೌಕ್ತೆ ಚಂಡಮಾರುತ ಸೋಮವಾರ ತಡರಾತ್ರಿ ಗುಜರಾತ್ ಗೆ ಅಪ್ಪಳಿಸಿದ ತೌಕ್ತೆ ಭಾರಿ ಪ್ರಮಾಣದ ನಷ್ಟ ಉಂಟು ಮಾಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು, ಚಂಡಮಾರುತದ ಪರಿಣಾಮ 40 ಸಾವಿರಕ್ಕೂ ಅಧಿಕ ಮರಗಳು, ಈ ವೇಳೆ ಚಂಡಮಾರುತದ ಪ್ರಭಾವಕ್ಕೆ 13 ಮಂದಿ ಮೃತಪಟ್ಟಿದ್ದು, 16 ಸಾವಿರ ಮನೆಗಳು ನಾಶವಾಗಿದೆ ಎಂದು ತಿಳಿಸಿದರು.