ಸಿಎಂ ಪುತ್ರ ವಿಜೇಯೇಂದ್ರ ದೂರಿನ ಮೇಲೆ ಸಿಸಿಬಿ ಕಾರ್ಯಾಚರಣೆ
ಬೆಂಗಳೂರು prajakiran. com : ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರ ಪಿಎ ರಾಜಣ್ಣನನ್ನು ಬೆಂಗಳೂರು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಸಿಎಂ ಪುತ್ರ ವಿಜೇಯೇಂದ್ರ ಹೆಸರಿನಲ್ಲಿ ಹಲವರಿಗೆ ಪಂಗನಾಮ ಹಾಕಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.
ಬಳ್ಳಾರಿ ಮೂಲದ ಪಿಎ ರಾಜು ಅಮಾಯಕ ಜನರಿಗೆ ಕೆಲಸ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ಹಣ ಪಡೆದಿದ್ದ.
ಸಚಿವ ಬಿ. ಶ್ರೀರಾಮುಲು ಅವರ ಬಳಿಯಲ್ಲಿ ಕಳೆದ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಈತ ಮಾಜಿ ಸಚಿವ ಗಾಲಿ ಜನಾರ್ಧನ್ ರೆಡ್ಡಿಗೂ ಆಪ್ತನಾಗಿದ್ದ.
ಸಚಿವರ ಹೆಸರಲ್ಲಿ ಕೋಟ್ಯಾಂತರ ರೂಪಾಯಿ ವಸೂಲಿ ಮಾಡಿದ ಆರೋಪದ ಮೇಲೆ ಸಿಸಿಬಿ ಪೊಲೀಸರು ಬಲೆಗೆ ಕೆಡವಿದ್ದಾರೆ ಎನ್ನಲಾಗಿದೆ.
ಶ್ರೀರಾಮುಲು ಪಿಎ ರಾಜು ವಿರುದ್ದ ಸಿಸಿಬಿಗೆ ಕಳೆದ ಕೆಲ ದಿನಗಳಿಂದ ದೂರುಗಳು ಬಂದಿದ್ದವು. ಈ ದೂರುಗಳ ಹಿನ್ನೆಲೆಯಲ್ಲಿ ವಂಚನೆಗೆ ಸಂಬಂಧಿಸಿದ ಮಹತ್ವದ ಸಾಕ್ಷಿಗಳನ್ನ ಕಲೆ ಹಾಕಿ ಕೊನೆಗೂ ಖೆಡ್ಡಾಕ್ಕೆ ಕೆಡವಲಾಗಿದೆ.
ಈತನ ವಿರುದ್ದ ಸ್ವತಃ ಸಿಎಂ ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ದೂರು ನೀಡಿದ್ದರು.
ವಿಜಯೇಂದ್ರ ಹೆಸರು ಸಹ ಹೇಳಿಕೊಂಡು ಹಲವು ಜನರಿಗೆ ವಂಚನೆ ಮಾಡಿದ್ದ ರಾಜುನನ್ನು ಬೆಂಗಳೂರಿನಲ್ಲಿ ಗುರುವಾರ ಸಂಜೆ ಸಚಿವ ಶ್ರೀರಾಮುಲು ಮನೆಯ ಬಳಿ ಪಿಎ ರಾಜುನ ವಶಕ್ಕೆ ಪಡೆಯಲಾಗಿರುವುದು ಇಲ್ಲಿ ಗಮನಿಸಬಹುದು.