ರಾಜ್ಯ

ಧಾರವಾಡದಲ್ಲಿ ಐಸಿಯು ಬೆಡ್ ಇಲ್ಲ, ವೆಂಟಿಲೇಟರ್ ಸೌಲಭ್ಯ ಇಲ್ಲ ಎಂದು ಕೈ ಚೆಲ್ಲಿದ ಜಿಲ್ಲಾಡಳಿತ…..!

ಧಾರವಾಡ prajakiran. com : ಧಾರವಾಡ ಜಿಲ್ಲೆಯ ಕರೋನಾ ಸೋಂಕಿತರ ವರದಿ ಮೂರು ನಾಲ್ಕು ದಿನಗಳ ನಂತರ ಬರುತ್ತಿದೆ.

ಅಲ್ಲಿಯವರೆಗೆ ಅವರಿಗೆ ಚಿಕಿತ್ಸೆ ಸಿಗುತ್ತಿಲ್ಲ. ಹಾಗಾದರೆ ಅವರ ಪರಿಸ್ಥಿತಿ ಏನು.

ಅನೇಕರಿಗೆ ಆಕ್ಸಿಜನ್, ವೆಂಟಿಲೇಟರ್ ಸಿಗುತ್ತಿಲ್ಲ. ಅವರ ಸಾವಿಗೆ ಹೊಣೆ ಧಾರವಾಡ ಜಿಲ್ಲಾಧಿಕಾರಿಯೇ ಹೊಣೆ ಎಂದು ಎಐಸಿಸಿ ಸದಸ್ಯ ದೀಪಕ ಚಿಂಚೋರೆ ಆರೋಪಿಸಿದ್ದಾರೆ‌.

ಸ್ವತಃ ಐದಾರು ದಿನ ನಿರಂತರವಾಗಿ ಧಾರವಾಡ ಜಿಲ್ಲಾಸ್ಪತ್ರೆ ಹಾಗೂ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ವೈದ್ಯರ ಜೊತೆಗೆ ನಿರಂತರವಾಗಿ ಸಂಪರ್ಕ ಸಾಧಿಸಿದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಅವರು ಅಸಹಾಯಕತೆ ವ್ಯಕ್ತಪಡಿಸಿದರು ಎಂದು ದೂರಿದರು.

ಆಸ್ಪತ್ರೆಗೆ ದಾಖಲಾದರೂ 24 ಗಂಟೆಗಳ ಕಾಲ ಚಿಕಿತ್ಸೆ ದೊರೆತಿಲ್ಲ. ದಲಿತ ಮಧ್ಯಮ ಕುಟುಂಬದ ವ್ಯಕ್ತಿ ಯೊಬ್ಬನಿಗೆ ಸ್ಟಕ್ಷರ್ ಮೇಲೆ ಮಲಗಿಸಲಾಗಿದೆ.

ಐಸಿಯುನಲ್ಲಿ ಬೆಡ್ ಇಲ್ಲ. ವೆಂಟಿಲೇಟರ್ ಸೌಲಭ್ಯ ಇಲ್ಲ ಎಂದು ವೈದ್ಯರು ಕೈ ಚೆಲ್ಲಿದ್ದಾರೆ.

ನನ್ನ ರಾಜಕೀಯ ಜೀವನದ 35 ವರ್ಷದಲ್ಲಿ ಇಂತಹ ಹೀನಾಯ ಸ್ಥಿತಿ ನೋಡಿರಲಿಲ್ಲ.

ಅವರ ಸಾವು ನನಗೆ ನೋವು ತರಿಸಿದೆ. ಜಿಲ್ಲಾಧಿಕಾರಿ ಮಾಧ್ಯಮದ ಎದುರು ಪೋಜು ಕೊಡದೆ ವಸ್ತು ಸ್ಥಿತಿ ಅರಿಯಲಿ.

ಎಲ್ಲಾ ಆಸ್ಪತ್ರೆಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿ, ವಸ್ತು ಸ್ಥಿತಿಯನ್ನು ಅರಿಯಲಿ ಎಂದು ಎಐಸಿಸಿ ಸದಸ್ಯ ದೀಪಕ ಚಿಂಚೋರೆ ಆಗ್ರಹಿಸಿದರು

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *