ಕಲಬುರಗಿ prajakiran.com : ರಾಜ್ಯದ ಬಿಜೆಪಿ ಸರಕಾರದಲ್ಲಿ ಕೆಲ ಶಾಸಕರಿಗೆ ಸಚಿವ ಸ್ಥಾನ ಸಿಗದಿರುವ ಕುರಿತು ಅಸಮಾಧಾನವಿರುವುದು ಸತ್ಯ ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಅವರು ಕಲಬರುಗಿ ಜಿಲ್ಲೆಯ ಹೊನ್ನಕಿರಣಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಈ ಕುರಿತು ಪ್ರತಿಕ್ರಿಯೆ ನೀಡಿದರು.
ನಮ್ಮ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರು ಇಬ್ಬರು ಸಮರ್ಥರಿದ್ದಾರೆ. ಅದನ್ನು ಬಗೆಹರಿಸುತ್ತಾರೆ ಎಂಬ ವಿಶ್ವಾಸವಿದೆಎಂದು ಹೇಳಿದರು.
ಕೆಲಸಚಿವರುಈ ಹೇಳಿಕೆಯನ್ನು ತಿರಸ್ಕರಿಸಿದ್ದಾರೆ. ಆದರೆ ಈಶ್ವರಪ್ಪಅದನ್ನು ಒಪ್ಪಿಕೊಂಡಿದ್ದು, ನಮ್ಮಲ್ಲಿ ಅಸಮಾಧಾನ ಇಲ್ಲ ಎಂಬ ಸಚಿವರ ಹೇಳಿಕೆಯಲ್ಲಿ ಹುರಳಿಲ್ಲ.
ಎಲ್ಲಾ ಶಾಸಕರು ಸಚಿವರು ಆಗಬೇಕೆಂಬ ಆಸೆ ಇರುತ್ತದೆ. ಊಟ ನೆಪದಲ್ಲಿ ಸಭೆ ಸೇರಿದ್ದಾರೆ. ಇದು ತಪ್ಪಿಲ್ಲ. ಇದನ್ನು ಬಗೆಹರಿಸುವ ಶಕ್ತಿ ಪಕ್ಷಕ್ಕಿದೆ.
ಪಕ್ಷದಲ್ಲಿನ ಭಿನ್ನಮತಶೀಘ್ರವೇ ಸರಿಹೋಗಲಿದೆ. ಯಡಿಯೂರಪ್ಪಅವರು ಪೂರ್ಣಅವಧಿಯನ್ನು ಮುಗಿಸಲಿದ್ದಾರೆ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಸಚಿವ ಈಶ್ವರಪ್ಪ ಹೇಳಿದರು.