ರಾಜ್ಯ

ಧಾರವಾಡ-71ರ ಮುಂದಿನ ಶಾಸಕ ಸಾಮಾಜಿಕ ಕಾರ್ಯಕರ್ತ ಬಸವರಾಜ ಕೊರವರ ಘೋಷಣೆ : ರಾಜಕೀಯ ಮೊಗಶಾಲೆಯಲ್ಲಿ ಮಿಂಚಿನ ಸಂಚಲನ

ಧಾರವಾಡ ಪ್ರಜಾಕಿರಣ.ಕಾಮ್ : ಸಾಮಾಜಿಕ ಕಾರ್ಯಕರ್ತ ಬಸವರಾಜ ಕೊರವರ ಅವರ ಜನುಮ ಕಾರ್ಯಕ್ರಮದಲ್ಲಿ ಮುಂದಿನ ಶಾಸಕರು-71 ಎಂಬ ಘೋಷಣೆ ಮೊಳಗಿರುವುದು ಧಾರವಾಡ ವಿಧಾನ ಸಭಾ ಕ್ಷೇತ್ರದಲ್ಲಿ ತೀವ್ರ ಕುತೂಹಲ ಕೆರಳಿಸಿದೆ‌.

ಹೌದು ಇದು ಅಚ್ಚರಿಯಾದ್ರೂ ಎಲ್ಲರೂ ನಂಬಲೇ ಬೇಕಾದ ಕಟು ಸತ್ಯ. ಪ್ರತಿ ವಿಧಾನ ಸಭಾ ಚುನಾವಣೆಯಲ್ಲಿ ಹೊಸ ಮುಖಕ್ಕೆ ಮಣೆ ಹಾಕುತ್ತ ಬಂದಿರುವ ಧಾರವಾಡ ಗ್ರಾಮೀಣ ಜನತೆ ಈ ಬಾರಿ ಖಂಡಿತ ಬದಲಾವಣೆ ಬಯಸುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಅದರಲ್ಲೂ ಬಡವರ ಮಕ್ಕಳು ಬೇಳಿಬೇಕ್ರಿ, ಜನರ ನೋವು, ನಲಿವುಗಳಿಗೆ ಸ್ಪಂದಿಸುಔರು ವಿಧಾನಸೌಧಕ್ಕೆ ಕಳುಹಿಸಬೇಕು ಎಂಬ ಭಾವನೆ ಜನರ ಮನಸ್ಸಿನಲ್ಲಿ ಮೊಳಕೆಯೊಡೆತ್ತಿರುವುದು ಹೊಸ ದಿಕ್ಕೂಚಿಗೆ ಕಾರಣವಾಗಲಿದೆ.

ಕಳೆದ ಎಂಟು ತಿಂಗಳಿಂದ ಸಂಬಳವಿಲ್ಲದಿದ್ದರೂ, ಮರಳಿ ಎಲ್ ಆಂಡ್ ಟಿ ಕಂಪನಿಗೆ ಸೇರಿ ಕೆಲಸ ಮಾಡಲು ಹೋರಾಟದ ಹಾದಿ ಹಿಡಿದಿರುವ ಜಲಮಂಡಳಿಯ ನೂರಾರು ನೌಕರರಿಗೆ ಬೆನ್ನಲುಬಾಗಿ ನಿಂತಿರುವ ಬಸವರಾಜ ಕೊರವರ ಅವರ ಜನುಮದಿನಕ್ಕೆ ಬೃಹತ್ ಕೇಕ್ ತಂದು ಕತ್ತರಿಸಿರುವುದು ಬಸವರಾಜ ಕೊರವರ ಅವರ ಭಾವನಾತ್ಮಕ ಘಟನೆಯೊಂದಕ್ಕೆ ಸಾಕ್ಷಿಯಾಯಿತು.

 

ಸದಾಕಾಲ ನ್ಯಾಯ, ನೀತಿ, ಬಡವರ, ನೊಂದವರ ಪರವಾಗಿ ನಿಂತು ಯಾವುದೇ ಫಲಾಪೇಕ್ಷೆಯಿಲ್ಲದೆ, ಹತ್ತು ಹಲವು ಜನಪರ ಹಾಗೂ ಸಮಾಜ ಕಾರ್ಯಗಳನ್ನು ಮಾಡುತ್ತಿರುವ ಸಾಮಾಜಿಕ ಕಾರ್ಯಕರ್ತ ಬಸವರಾಜ ಕೊರವರ ಅವರು ಮೊದಲೇ ಕಷ್ಟದಲ್ಲಿದ್ದಿರಿ, ಈ ಸಂಭ್ರಮ ಯಾಕೆ ಎಂದು ಕಣ್ಣೀರು ಹಾಕಿ ಅವರಿಗೆ ಧೈರ್ಯ, ವಿಶ್ವಾಸ ತುಂಬಿ, ನಿಮ್ಮೊಂದಿಗೆ ನಾವಿದ್ದೇವೆ ಎಂಬ ಸಾರ್ಥಕತೆ ಮೆರೆದರು.

ಅದರ ವೀಡಿಯೋ ಇಲ್ಲಿದೆ ನೋಡಿ..

ಇದಲ್ಲದೆ, ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮಸ್ಥರು ಹಾಗಣು ಹತ್ತು ಹಲವು ಹಳ್ಳಿಗಳು ಹಾಗೂ ಬಡಾವಣೆ ಸಾವಿರಾರು ಜನರು
ಬಸವರಾಜ ಕೊರವರ ಧಾರವಾಡ- 71 ರ ಮುಂದಿನ ಶಾಸಕರು ಎಂಬ ಕೇಕ್ ತಂದು ಸಂಭ್ರನಿಸಿದಲ್ಲದೆ, ಸನ್ಮಾನ ಮಾಡಿ ಬಾನೆತ್ತರಕ್ಕೆ ಘೋಷಣೆ ಮೊಳಗಿಸಿ ಹೋರಾಟದ ಸಾಗರಕ್ಕೆ ನೂರಾರು ನದಿಗಳು ಎಂಬುದನ್ನು ಸಾಬಿತು ಪಡಿಸಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *