ರಾಜ್ಯ

ವಿನಯ ಕುಲಕರ್ಣಿ ಬಂಧನದಿಂದ ಮನಸ್ಸಿಗೆ ನೋವಾಗಿದೆ ಎಂದ ಮುರುಘಾಮಠದ ಸ್ವಾಮೀಜಿ  

ಧಾರವಾಡ prajakiran.com : ವಿನಯ ಕುಲಕರ್ಣಿಯವರನ್ನು ಸಿ.ಬಿ.ಐ. ಅಧಿಕಾರಿಗಳು ಯೋಗೀಶಗೌಡರ ಕೊಲೆ ಪ್ರಕರಣದಲ್ಲಿ ದಸ್ತಗೀರ ಮಾಡಿರುವ ಸುದ್ಧಿ ಕೇಳಿ ಮನಸ್ಸಿಗೆ ನೋವಾಗಿದೆ ಎಂದು ಮುರುಘಾಮಠದ  ಮಲ್ಲಿಕಾರ್ಜುನ ಸ್ವಾಮೀಜಿ  ಕಳವಳ ವ್ಯಕ್ತಪಡಿಸಿದ್ದಾರೆ.

ಅವರು ನಮ್ಮ ಮಠದ ಆಡಳಿತ ಮಂಡಳಿಯ ಅಧ್ಯಕ್ಷರು. ಕಾನೂನಿನ ಮುಂದೆ ಯಾರು ದೊಡ್ಡವರಲ್ಲಾ. ಆದರೆ ಅಧಿಕಾರಿಗಳು ಯಾವುದೇ ಪ್ರಭಾವ ಅಥವಾ ಒತ್ತಡಕ್ಕೆ ಒಳಗಾಗದೆ ನಿಷ್ಪಕ್ಷಪಾತವಾಗಿ ತನಿಖೆ ಮಾಡಲಿ. ಸತ್ಯ ಹೊರಗೆ ಬರಲಿ ಎಂದು ಆಶಿಸಿದ್ದಾರೆ.

ರಾಜಕೀಯೇತರ ತನಿಖೆ ನಡೆಯಲಿ. ಸಿ.ಬಿ.ಐ. ಸಂಸ್ಥೆ ರಾಜಕೀಯ ವೈರತ್ವ ಸಾಧನೆಗೆ ಅಸ್ತ್ರವಾಗದಿರಲಿ. ವಿನಯ ಕುಲಕರ್ಣಿಯವರು ನಿರಪರಾಧಿಗಳಾಗಿ ಹೊರಗೆ ಬರಲಿ ಎಂದು ಹಾರೈಸುತ್ತೇವೆ ಎಂದು ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮಿಗಳು ತಿಳಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *