ಧಾರವಾಡ : Prajakiran.Com : ಭಾರತೀಯ ಜನತಾ ಪಕ್ಷದ ಧಾರವಾಡ ನಗರ 71 ಯುವ ಮೋರ್ಚಾ ವತಿಯಿಂದ ಧಾರವಾಡದ ಸುಪ್ರಸಿದ್ಧ ಮುರುಘಾಮಠದ ಜಾತ್ರಾ ಮಹೋತ್ಸವದ ಹಿನ್ನಲೆಯಲ್ಲಿ ಸಂಪೂರ್ಣ ಮಠದ ಆವರಣವನ್ನು ಸ್ವಚ್ಚತಾ ಕಾರ್ಯಕ್ರಮ ಕೈಗೊಳ್ಳಲಾಯಿತು.
ಮಠದ ಮಲ್ಲಿಕಾರ್ಜುನ ಶ್ರೀಗಳು ಸ್ವಚ್ಛ ಸಂಡೇ ಅಭಿಯಾನದ ದಿವ್ಯ ಸಾನಿಧ್ಯ ವಹಿಸಿದ್ದರು.
ಯುವ ಮೋರ್ಚಾ ಅಧ್ಯಕ್ಷ ಶಕ್ತಿ ಹಿರೇಮಠ, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಕಿರಣ ಉಪ್ಪಾರ್, ಮಂಡಳ ಅಧ್ಯಕ್ಷ ಸುನೀಲ ಮೋರೆ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ್ ಕೋಟ್ಯಾನ್, ಜಿಲ್ಲಾ ಕಾರ್ಯದರ್ಶಿ ಸಿದ್ದು ಕಲ್ಯಾಣ ಶೆಟ್ಟಿ, ಮಂಡಳ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ವಿನಾಯಕ ಗೊಂಧಳಿ, ಮಹಿಳಾ ಮೋರ್ಚಾ ಅಧ್ಯಕ್ಷ ರಾಜೇಶ್ವರಿ ಅಳಗವಾಡಿ, ಪ್ರಕಾಶ್ ಇಂಗಳೆ, ಪಕ್ಷದ ಹಿರಿಯರಾದ ಪುಷ್ಪಾ ನವಲಗುಂದ, ನಿಂಗಪ್ಪ ಸಪೂರಿ, ಜಗದೀಶ್ ಚಿಕ್ಕಮಠ, ಕಪಿಲ ಶಿರಹಟ್ಟಿ, ಲತಾ ಕೆರಿಮಠ, ಮಾದೇವಿ ಕೌದಿ, ಮಾಲತಿ ಬರಗಿ, ರಾಹುಲ್ ಅಷ್ಟಗಿ, ಯುವಮೋರ್ಚಾ ಪದಾಧಿಕಾರಿಗಳಾದ ರಾಘವೇಂದ್ರ ತುಪ್ಪದ, ಕಾರ್ತಿಕ ಪೂಜಾರ್, ಸಚಿನ ಚವಾಣ್, ಸೂರಂಜನ್ ಗೂಂಡೆ, ಸಾಗರ್ ಜೋಶಿ, ರಾಜೇಶ್ ನಾಯ್ಕ್ , ಅಮೃತ ಹೆಬ್ಬಳ್ಳಿ, ರವಿ ಮಾಳಗಾರ್, ವಿನಾಯಕ ಭೋಳೆ, ಪೃಥ್ವಿ ಚಿತಗುಬ್ಬಿ, ರೋಹಿತ, ಸಾಯಿಪ್ರಸಾದ, ಗಂಗನಗೌಡ, ನಿಂಗನಗೌಡ, ಹೇಮಂತ್, ನಾಗರಾಜ್ ಸೇರಿದಂತೆ ಅನೇಕರು ಸ್ವಚ್ಚತಾ ಕಾರ್ಯದಲ್ಲಿ ಭಾಗವಹಿಸಿದ್ದರು.