ಧಾರವಾಡ prajakiran.com : ಸಾಲಬಾಧೆ ತಾಳಲಾರದೆ ಬೈಕ್ ರಿಪೇರಿ ಮಾಡುತ್ತಿದ್ದ ಮೆಕ್ಯಾನಿಕ್ ಒಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡ ಹಾಸ್ಮಿನಗರದ ಮನೆಯಲ್ಲಿ ನಡೆದಿದೆ.
ಟೋಲ್ ನಾಕಾ ಬೈಕ್ ಗ್ಯಾರೇಜ್ ನಲ್ಲಿ ರಿಪೇರಿ ಮಾಡಿ ಒಳ್ಳೆಯ ಹೆಸರು ಮಾಡಿದ್ದ ಗೌಸ್ ಮೆಸ್ತ್ರೀ ಎಂಬುವವರೇ ಆತ್ಮಹತ್ಯೆಗೆ ಶರಣಾದ ದುರ್ದೈವಿ ಎಂದು ತಿಳಿದುಬಂದಿದೆ.
ಬೆಳಗ್ಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಧಾರವಾಡ ಶಹರ ಪೋಲಿಸರು ಸ್ಥಳಕ್ಕೆ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.