ರಾಯಚೂರು Prajakiran.com : ಮತ ಎಣಿಕೆ ಮಾಹಿತಿ ಸರಿಯಾಗಿ ನೀಡುತ್ತಿಲ್ಲ ಎಂದು ಆಕ್ಷೇಪಿಸಿದ ಮಸ್ಕಿ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಸಹೋದರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಸನಗೌಡ ತುರ್ವಿಹಾಳ ಸಹೋದರ ಸಿದ್ದನಗೌಡ ತುರ್ವಿಹಾಳ ಕರ್ತವ್ಯನಿರತ ಪೊಲೀಸರ ಜತೆ ಮಾತಿನ ಜಟಾಪಟಿ ನಡೆಸಿದರು.
ಈ ವೇಳೆ ಡಿಸಿ ಆರ್.ವೆಂಕಟೇಶಕುಮಾರ್ ಮಧ್ಯಪ್ರವೇಶಿಸಿ ಅವರನ್ನು ವಶಕ್ಕೆ ಪಡೆಯಿರಿ ಎಂದು ಸೂಚಿಸಿದರು.
ಬಳಿಕ ಪೊಲೀಸರು ಅವರನ್ನು ನ್ಯೂಸ್ ರೂಂ ಕರೆದಯೊಯ್ದು ಕೂಡಿಸಿದರು.
ಈ ವೇಳೆ ಮಾತನಾಡಿದ ಸಿದ್ದನಗೌಡ, ಅಧಿಕಾರಿಗಳಿಗೆ ಕೇಳಿದರೆ ಸರಿಯಾದ ಮಾಹಿತಿಯನ್ನು ಕೊಡುತ್ತಿಲ್ಲ ಎಂದು ಆರೋಪಿಸಿದ್ದಾರೆ.