ರಾಜ್ಯ

ರಾಜ್ಯದಲ್ಲಿ ಮೇ 10 ರಿಂದ 24 ರವರೆಗೆ ಸಂಪೂರ್ಣ ಲಾಕ್ ಡೌನ್ ಎಂದ ಸಿಎಂ

ಬೆಂಗಳೂರು prajakiran.com :
ರಾಜ್ಯದಲ್ಲಿ ಮೇ 10 ರಿಂದ 24 ರವರೆಗೆ ಸಂಪೂರ್ಣ ಲಾಕ್ ಡೌನ್ ಮಾಡಲಾಗುತ್ತಿದೆ ಎಂದು ಸಿಎಂ ಬಿ. ಎಸ್. ಯಡಿಯೂರಪ್ಪ ಪ್ರಕಟಿಸಿದ್ದಾರೆ.

ಎಲ್ಲಾ ಅಂಗಡಿ, ಮುಗ್ಗಟ್ಟು, ಬಾರ್, ಪಬ್ ಕ್ಲೋಸ್ ಮಾಡಲಾಗುವುದು.
ಬೆಳಗ್ಗೆ 6 ಗಂಟೆಯಿಂದ ಹತ್ತು ಗಂಟೆಯವರೆಗೆ ಮದ್ಯ ಪಾರ್ಸಲ್ ಇರುತ್ತದೆ.

ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಯ ಸಂಚಾರ ಮಾಡುವ ಅಂತರ್ ಜಿಲ್ಲೆಯ ಪ್ರವಾಸ ಬ್ರೇಕ್ ಹಾಕಲಾಗಿದೆ.

ಎಲ್ಲಾ ಜಿಲ್ಲೆಯ ಪ್ರವೇಶ ದ್ವಾರ ಬಂದ ಮಾಡಲಾಗಿದೆ. ಬೆಳಗ್ಗೆ 6 ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ಹಾಲು , ತಳ್ಳು ಗಾಡಿಯ ಮೂಲಕ ಹಣ್ಣು,ತರಕಾರಿ ಮಾರಾಟ ಮಾಡಲು ಅವಕಾಶ.

ಬೆಳಗ್ಗೆ ಆರು ಗಂಟೆಯಿಂದ ಹತ್ತು ಗಂಟೆಯವರೆಗೆ ಆಹಾರ,ಮೊಂಸದಂಗಡಿ,. ಹೊಟೇಲ್ ನಲ್ಲಿ ಉಪಹಾರ,
ಬಾರ್ ಗಳಲ್ಲಿ ಎಣ್ಣೆ ಪಾರ್ಸೆಲ್ ಹತ್ತು ಗಂಟೆಯವರೆಗೆ ಸಿಗುತ್ತವೆ.
ರಸ್ತೆ ಕಾಮಗಾರಿ, ಕಟ್ಟಡ ಕಾಮಗಾರಿ ಮಾರಾಟಕ್ಕೆ ಅವಕಾಶವಿದೆ.

ಕಠಿಣ ಕ್ರಮ ಅನಿವಾರ್ಯವಾಗಿದೆ.
ಹದಿನೈದು ದಿನಗಳ ಕಾಲ ಲಾಕ್ ಡೌನ್ ಮಾಡಲು ನಿರ್ಧಾರ ಮಾಡಿದ್ದು, ರಾಜ್ಯ ಬಹುತೇಕ್ ಲಾಕ್ ಲಾಕ್ ಆಗಲಿದೆ ಎಂದು ವಿವರಿಸಿದರು.

ಮೆಡಿಕಲ್, ಲ್ಯಾಬ್, ಆಸ್ಪತ್ರೆ ಮುಕ್ತವಾಗಿ ಇದೆ. ಮದುವೆಗೆ ಕೇವಲ 50 ಜನರಿಗೆ ಅವಕಾಶ, ಮಂದಿರ ಮಸೀದಿ, ಚರ್ಚ್ ಗಳಿಗೆ ಜನರ ಪ್ರವೇಶ ಇಲ್ಲ.

ಕೃಷಿ ಸಂಬಂಧಿಸಿದ ಚಟುವಟಿಕೆಗಳನ್ನು ಅವಕಾಶ ನೀಡಲಾಗಿದೆ ಎಂದು ಸಿಎಂ ಬಿಎಸ್ ವೈ ತಿಳಿಸಿದ್ದಾರೆ.

ರಾಜ್ಯದ ಪ್ರಧಾನ‌ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, ಯಾವುದೇ ವಾಹನ ಸಂಚಾರಕ್ಕೆ ಅವಕಾಶ ಇಲ್ಲ. ಪಾಸ್ ವ್ಯವಸ್ಥೆ ಇಲ್ಲ. ಎಂದು ಹೇಳಿದರು.

ಅಗತ್ಯ ವಸ್ತುಗಳ ಸೇವೆ ಹೊರತು ಪಡಿಸಿ ಎಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ.

ಕ್ಯಾಬ್, ಆಟೋ, ಟಾಕ್ಸಿ ಸಂಚಾರ ನಿಷೇಧ ಇರಲಿದೆ, ರೈಲು ಸಂಚಾರ ಎಂದಿನಂತೆ ಇರುತ್ತದೆ. ಸರಕು ಸರಬರಾಜು ವಾಹನಗಳ ಸಂಚಾರ ಎಂದಿನಂತೆ ಇರಲಿದೆ. ಇದು ಲಾಕ್ ಡೌನ್ ಅಲ್ಲ ನಿರ್ಬಂಧ ಎಂದು ಅವರು ವಿವರಿಸಿದರು‌.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *