ರಾಜ್ಯ

ಮಾಜಿ ಸಚಿವ ರಮೇಶ ಜಾರಕಿಹೊಳಿ ಪ್ರಕರಣ : ಯುವತಿಯಿಂದ ಪೊಲೀಸ್ ಆಯುಕ್ತರಿಗೆ ಮೂರು ಪುಟದ ಪತ್ರ…..!

ಬೆಂಗಳೂರು prajakiran.com :
ಮಾಜಿ ಸಚಿವ ರಮೇಶ ಜಾರಕಿಹೊಳಿ
ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಂದ ಯುವತಿ ಮತ್ತೆ ಸಿಡಿದೆದ್ದಿದ್ದಾಳೆ.


ಪ್ರಕರಣದಲ್ಲಿ ಆರೋಪಿಯನ್ನು ರಕ್ಷಿಸಲು ರಾಜ್ಯದ ಬಿಜೆಪಿ
ಸರ್ಕಾರ ಹಾಗೂ ಎಸ್ ಐಟಿ ಮುಂದಾಗಿದೆ ಎಂಬ ಆತಂಕ ನನಗೆ ಕಾಡುತ್ತಿದೆ ಎಂದು ಸಂಶಯ ವ್ಯಕ್ತಪಡಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಅವರಿಗೆ ಯುವತಿ ಪತ್ರ ಬರೆದಿದ್ದಾಳೆ.

ಪ್ರಕರಣ ಕುರಿತು ನಿರಂತರವಾಗಿ ಎಸ್ ಐಟಿ ನನಗೆ ವಿಚಾರಣೆ ನಡೆಸಿದೆ. ಆದರೆ ಆರೋಪಿ ಅನಾರೋಗ್ಯದ ನೆಪವೊಡ್ಡಿ ಈವರೆಗೆ ವಿಚಾರಣೆಗೆ ಹಾಜರಾಗಿಲ್ಲ.

ಎಲ್ಲೋ ಒಂದು ಕಡೆ ನನ್ನ ವಿಶ್ವಾಸ ಕುಗ್ಗಿಸುವ ಕೆಲಸ ನಡೆದಿದೆ. ಎಸ್ ಐ ಟಿ ಮೇಲೆಯೇ ನನಗೆ ವಿಶ್ವಾಸವಿಲ್ಲದಂತಾಗಿದೆ.

ಅವರು ಪಿಜಿ ಪರಿಶೀಲನೆ ನಡೆಸಿದ ರೀತಿ,
ಸರ್ಕಾರ ನೇಮಕ ಮಾಡಿರುವ ವಿಶೇಷ ಅಭಿಯೋಜಕರ ನೇಮಕದ ಬಗ್ಗೆ ನನಗೆ ಆಕ್ಷೇಪವಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾಳೆ.

ನನ್ನ ಸಹಮತವಿಲ್ಲದೇ ವಿಶೇಷ ಅಭಿಯೋಜಕರ ನೇಮಕ ಮಾಡಲಾಗಿದೆ. ಸರ್ಕಾರದ ಒತ್ತಡಕ್ಕೆ ಎಸ್ ಐಟಿ ಅಧಿಕಾರಿಗಳು ಮಣಿಯುತ್ತಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಆರೋಪಿ ಪರ ವಕಾವತ್ತು ವಹಿಸಿದ್ದು, ಆರೋಪ ಮುಕ್ತರಾಗಿ ಹೊರ ಬರುತ್ತಾರೆ ಎಂದು ಹೇಳಿರುವುದು ನೋಡಿದರೆ ಪ್ರಕರಣದ ದಿಕ್ಕು ತಪ್ಪಿಸಿದಂತಿದೆ ಎಂದು ಗುಡುಗಿದ್ದಾಳೆ.

ನೋಂದ ಸಂತ್ರಸ್ತ ತುವತಿಯನ್ನೇ ಆರೋಪಿ ತರಹ ವಿಚಾರಣೆ ನಡೆಸಿ, ಆರೋಪಿಯನ್ನು ಹಾಯಾಗಿ ಓಡಾಡಲು ಬಿಟ್ಟಿರುವುದು ಎಷ್ಟು ಸರಿ ಎಂದು ಕಿಡಿಕಾರಿದ್ದಾಳೆ.

ನಿಷ್ಪಕ್ಷಪಾತವಾಗಿ ಪ್ರಕರಣದ ತನಿಖೆ ನಡೆಸಿ ನನಗೆ ನ್ಯಾಯ ಕೊಡಿಸಿ ಎಂದು ಯುವತಿ ಪತ್ರದಲ್ಲಿ ಮನವಿ ಮಾಡಿದ್ದಾಳೆ.

ಇಡೀ ಪ್ರಕರಣ ನಿಷ್ಪಕ್ಷಪಾತವಾಗಿ ತನಿಖೆ ನಡೆಯುತ್ತಿಲ್ಲ. ಆರೋಪಿಯನ್ನು ರಕ್ಷಿಸಲು ನನ್ನ ವಿರುದ್ಧವೇ ಅಧಿಕಾರಿಗಳು ಷಡ್ಯಂತ್ರ ನಡೆಸುತ್ತಿದ್ದಾರೆ ಎಂಬಂತೆ ಭಾಸವಾಗುತ್ತಿದೆ ಎಂದು ದೂರಿದ್ದಾಳೆ.

ರಮೇಶ್ ಜಾರಕಿಹೊಳಿ ದೂರಿನಲ್ಲಿ ನನ್ನ ಹೆಸರಿಲ್ಲ. ನನ್ನ ಹೆಸರಿಲ್ಲದಿದ್ದರೂ ಪಿಜಿಯಲ್ಲಿ ಪರಿಶೀಲನೆ ನಡೆಸಲಾಗಿದೆ.

ರಮೇಶ್ ಜಾರಕಿಹೊಳಿ ನನ್ನ ಚಾರಿತ್ರ್ಯವಧೆ ಮಾಡುವ ಷಡ್ಯಂತ್ರ ನಡೆಸಿದ್ದಾರೆ ಎಂದು ಬರೆದಿದ್ದಾಳೆ.

ಎಸ್ ಐಟಿ ನೇರವಾಗಿ ಮುಖ್ಯಮಂತ್ರಿ ಅಡಿ ಬರುತ್ತದೆ. ಸಿಎಂ ಹೇಳಿಕೆ ನನಗೆ ಅಚ್ಚರಿ ತಂದಿದೆ.

ನನಗಾಗಿರುವ ಅನ್ಯಾಯದ ಬಗ್ಗೆ ಸ್ವತ: ನಾನು ದೂರು ನೀಡಿದ್ದರೂ ಆರೋಪಿಯನ್ನು ಕೇವಲ 3 ಗಂಟೆ ವಿಚಾರಣೆ ನಡೆಸಿ ಬಿಟ್ಟು ಕಳುಹಿಸಿರುವ ಎಸ್ ಐಟಿ ನಡೆ ನೋಡಿದರೆ ಪ್ರಕರಣದ ತನಿಖೆ ಮೇಲೆಯೇ ನನಗೆ ನಂಬಿಕೆ ಬರುತ್ತಿಲ್ಲ.

ಪ್ರಕರಣದಲ್ಲಿ ನ್ಯಾಯಸಮ್ಮತ ವಿಚಾರಣೆ ನಡೆಸಬೇಕು ಎಂಬ ಒತ್ತಾಯ ಮಾಡಿದ್ದಾಳೆ‌.

ಸರ್ಕಾರದ ಒತ್ತಡಕ್ಕೆ ಎಸ್ ಐ ಟಿ ಮಣಿಯದೇ ನನಗೆ ನ್ಯಾಯ ಕೊಡಿಸಬೇಕು ಎಂದು ಪೊಲಿಸ್ ಆಯುಕ್ತ ಕಮಲ್ ಪಂಥ್ ಅವರಿಗೆ ಬರೆದ ಪತ್ರದಲ್ಲಿ ಯುವತಿ ಮನವಿ ಮಾಡಿದ್ದಾಳೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *