*ಬಿಜೆಪಿ ಆರೋಪ ಏನಾದರೂ ಫ್ರೂಪ್ ಬೇಕಲ್ವಾ…?; ಸಚಿವ ಸಂತೋಷ ಲಾಡ್*
ಧಾರವಾಡ ಪ್ರಜಾಕಿರಣ.ಕಾಮ್ : ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎನ್ನುತ್ತಿರುವ ಬಿಜೆಪಿ ಆರೋಪಕ್ಕೆ ಏನಾದರೂ ಫ್ರೂಪ್ ಬೇಕಲ್ವಾ? ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಪ್ರಶ್ನಿಸಿದರು.
ಧಾರವಾಡ ನಗರದಲ್ಲಿ ಮಾಧ್ಯಮದವರ ಜೋತೆ ಮಾತನಾಡಿದ ಅವರು, ಬಿಜೆಪಿ ಆರೋಪ ಅಷ್ಟೇ. ಈಗಾಗಲೇ ಕೆಲಸ, ಕಾಮಗಾರಿಗಳು ಪ್ರಗತಿಯಲ್ಲಿವೆ.
ಸರ್ಕಾರದ ಹೊಸ ಹೊಸ ಕಾರ್ಯಕ್ರಮಗಳು ಜಾರಿಯಾಗಿವೆ. ಎಲ್ಲ ಕೆಲಸಗಳಿಗೆ ಹಂತ ಹಂತವಾಗಿ ಅನುದಾನ ಬರುತ್ತದೆ ಎಂದು ತಿಳಿಸಿದರು.
ಮೂರು ತಿಂಗಳಲ್ಲಿ ಎಲ್ಲವೂ ಮುಗಿದು ಬಿಡುತ್ತವಾ? ಶೇ. 40 ರಷ್ಟು ಕಮಿಷನ್ ಬಿಜೆಪಿ ಮೇಲೆ ಆರೋಪ ಇದೆ. ಈಗ ಬಿಜೆಪಿ ಶೇ.40 ಪರ್ಸೆಂಟ್ ಆರೋಪ ಅಡಿಪಾಯ ಇಲ್ಲದು ಎಂದು ಹೇಳಿದರು.