ಧಾರವಾಡ prajakiran. com : ಪೌರ ಕಾರ್ಮಿಕರಿಗೆ ಖಾಯಂ ನೌಕರಿ, ಪಿ ಎಫ್ , ಸಂಬಳ ಖಾತೆಗೆ ನೇರವಾಗಿ ಜಮಾವಣೆ ಸೇರಿದಂತೆ ಮುಂತಾದ ಬೇಡಿಕೆ ಈಡೇರಿಸುವಂತೆ ಇತ್ತಾಯಿಸಿ ನೂರಾರು ಪೌರ ಕಾಮಿ೯ಕರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಪ್ರತಿಭಟನೆ ಆರಂಭಿಸಿದ್ದಾರೆ.
ಮಳೆ, ಚಳಿಯನ್ನು ಲೆಕ್ಕಿಸದೆ ಮಾಡು ಇಲ್ಲವೇ ಮಡಿ ಎಂಬ ಹೋರಾಟದ ಕಿಚ್ಚು ಕಂಡು ಬಂತು.
ಪೌರ ಕಾರ್ಮಿಕರ ಸಂಘದ ಅಧ್ಯಕ್ಷ
ವಿಜಯ ಗುಂಟ್ರಾಳ ನೇತೃತ್ವದಲ್ಲಿ ಈ ಪ್ರತಿಭಟನೆ ಆರಂಭವಾಗಿದೆ.
ಶುಕ್ರವಾರ ಆರಂಭವಾದ ಈ ಪ್ರತಿಭಟನೆಗೆ ದಲಿತ ಸಮಾಜ ಯುವ ಮುಖಂಡ ರಾಕೇಶ ದೊಡ್ಡಮನಿ ಬೆಂಬಲ ವ್ಯಕ್ತಪಡಿಸಿ, ಪಾಲ್ಗೊಂಡಿದ್ದರು.
ಶನಿವಾರ ಎರಡನೇ ದಿನಕ್ಕೆ ಕಾಲಿಟ್ಟಿದ್ದು,ಇದಕ್ಕೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಹಾಗೂ ರಾಜ್ಯದ ಬಿಜೆಪಿ ಸರಕಾರ ಯಾವ ರೀತಿ ಸ್ಪಂದಿಸುತ್ತದೆ ಎಂಬುದು ಕಾದು ನೋಡಬೇಕು.