ರಾಜ್ಯ

ಹಾಲಿ-ಮಾಜಿ ಹೊರಹಾಕಲು ಹೊಸ ಪ್ಲಾನ್ ಮಾಡಿದ ಧಾರವಾಡದ ಜೊಡೆತ್ತುಗಳು

*ಬಡವರ ಮಕ್ಕಳು ವಿಧಾನ ಸೌಧಕ್ಕೆ ಹೋಗಬೇಕು ಎಂಬ ಕೂಗಿಗೆ ಇನ್ನಷ್ಟು ಬಲ*

*ಬದಲಾವಣೆಗಾಗಿ ಹೋರಾಡು ಬದುಕಿದ್ದರೆ ನಾಯಕನಾಗ್ತಿಯಾ ಸತ್ತರೆ ಇತಿಹಾಸ ಸೇರ್ತಿಯಾ ಎಂದ ಬಡವರ ಮನೆಮಗ ಬಸವರಾಜ ಕೊರವರ*

*ಹಾಲಿ-ಮಾಜಿ ಹೊರಹಾಕಲು ಹೊಸ ಪ್ಲಾನ್ ಮಾಡಿದ ಧಾರವಾಡದ ಜೊಡೆತ್ತುಗಳು*

ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡ ವಿಧಾನ ಸಭಾ ಕ್ಷೇತ್ರ-71 ದಿನದಿಂದ ದಿನಕ್ಕೆ ರಂಗೇರುತ್ತಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳಿಗೆ ಶೆಡ್ಡು ಹೊಡೆಯಲು ಧಾರವಾಡದ ಜೋಡತ್ತುಗಳು ರೆಡಿಯಾಗಿವೆ.

ತವನಪ್ಪ ಅಷ್ಟಗಿ ಹಾಗೂ ಬಸವರಾಜ ಕೊರವರ ಇಬ್ಬರು ಜಂಟಿಯಾಗಿ ಕ್ಷೇತ್ರದ ವ್ಯಾಪ್ತಿಯಲ್ಲಿ ಜನಾಭಿಪ್ರಾಯ ಸಂಗ್ರಹಿಸಿ ಹೋರಾಟ ನಡೆಸಲು ನಿರ್ಧರಿಸಿದ್ದಾರೆ.

ಅಲ್ಲದೆ, ಹಾಲಿ ಹಾಗೂ ಮಾಜಿಯನ್ನು ಮನೆಗೆ ಕಳುಹಿಸುವ ಮೂಲಕ ಅವರ ಮನೆ ಬಾಗಿಲು ಕಾಯುವುದು, ಅಪ್ಪಾರ, ಅಣ್ಣಾರ ಅನ್ನೊವುದಕ್ಕೆ ಮುಕ್ತಿ ಹಾಡುವ ಮೂಲಕ ಬಡವರ ಮಕ್ಕಳು ವಿಧಾನಸೌಧಕ್ಕೆ ಹೋಗಬೇಕು ಎಂಬ ಜನಧ್ವನಿಗೆ ಪಣತೊಟ್ಟಿದ್ದಾರೆ.

ನಿನ್ನೆ ಇಬ್ಬರು ತಮ್ಮ ಬೆಂಬಲಿಗರು ಹಾಗೂ ಅಭಿಮಾನಿಗಳ ಜಂಟಿ ಸಭೆಯಲ್ಲಿ ಮಾತನಾಡಿದ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ್, ಬಾಬಾಸಾಹೇಬ್ ಅಂಬೇಡ್ಕರ್ ಅವರ ಜನುಮ ದಿನದಂದು ನಾವೆಲ್ಲರೂ ಒಂದು ಪಣತೊಡಬೇಕಿದೆ.

ಬಡವರ ಮಕ್ಕಳು ವಿಧಾನ ಸೌಧಕ್ಕೆ ಹೋಗಬೇಕು ಎಂಬ ಏಕೈಕ ಸಂಕಲ್ಪ ಮಾಡಬೇಕು.

ಅಂಬೇಡ್ಕರ್ ಅವರು ಹೇಳಿದ ಮಾತು
ಬದಲಾವಣೆಗಾಗಿ ಹೋರಾಡು ಬದುಕಿದ್ದರೆ ನಾಯಕನಾಗ್ತಿಯಾ ಸತ್ತರೆ ಇತಿಹಾಸ ಸೇರ್ತಿಯಾ ಅಂತ ಹೇಳಿದ್ದಾರೆ.

ಅಲ್ಲದೆ, ಯಾರ ಅಧಿಕಾರವು ಶಾಶ್ವತವಾಗಿ ಇರಬಾರದು ಎಂಬ ಕಾರಣಕ್ಕೆ ಐದು ವರ್ಷಕ್ಕೊಮ್ಮೆ ಮತ ಚಲಾಯಿಸುವ ಹಕ್ಕನ್ನು ನಮಗೆ ನೀಡಿದ್ದಾರೆ.

ನಾವು ಎಷ್ಟು ದಿನ ಅಂತ ಇವರ ಪಲ್ಲಕ್ಕಿ ಹೊರುವ ಕೆಲಸ ಮಾಡೋಣ. ಜನರ ಪಲ್ಲಕ್ಕಿ ಹೊರುವುದು ಯಾವಾಗ ಎಂದು ಕಿಡಿಕಾರಿದರು.

ಹೀಗಾಗಿ ಬಡವರ ಧ್ವನಿಯಾಗಿ ಕೆಲಸ ಮಾಡುವವರನ್ನು ಆಯ್ಕೆ ಮಾಡಬೇಕು. ಕ್ಷೇತ್ರದ ಜನರ ಆಶೋತ್ತರಗಳನ್ನು ಈಡೇರಿಸುವ ಜನ ಸೇವಕ ಬೇಕು ಹೊರತು ಪಾಳೆಗಾರರಲ್ಲ ಎಂದು ಬಸವರಾಜ ಕೊರವರ ಮನವಿ ಮಾಡಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *