ಕೊಡಗು prajakiran.com : ವಿದ್ಯಾರ್ಥಿಯೊಬ್ಬಳು ಪೋಷಕರು ಸ್ಮಾಟ್ ಪೋನ್ ಕೊಡಸದಕ್ಕೆ ಮನನೊಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.
ಸೋಮವಾರಪೇಟೆ ತಾಲ್ಲೂಕಿನ ಕುಶಾಲನಗರದ ಚೈತ್ರ ಲೇಔಟ್ ನಿವಾಸಿ ವಿಶ್ವನಾಥ್ ಎಂಬುವವರ ಪುತ್ರಿಯೇ ಈ ನತದೃಷ್ಟ ಬಾಲಕಿಯಾಗಿದ್ದಾಳೆ.
ಕೇವಲ 12 ವರ್ಷದ ಚೈತನ್ಯ ಮೃತ ಬಾಲಕಿಯಾಗಿದ್ದಾಳೆ. ಇಕೆ ತನ್ನ ತಂದೆಗೆ ಸ್ಮಾರ್ಟ್ ಫೋನ್ ಕೇಳಿದ್ದಳು.
ಆದರೆ ತಂದೆ ಅದನ್ನು ನಿರಾಕರಿಸಿದಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದೆನ್ನುವ ಶಂಕೆ ವ್ಯಕ್ತವಾಗಿದೆ.
ಈ ಘಟನೆ ಸಂಬಂಧ ಕುಶಾಲನಗರ ಪಟ್ಟಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.