ವರದಿ : ಪ್ರಶಾಂತ ಹೂಗಾರ
ಗೋಕಾಕ prajakiran.com : ರಸ್ತೆ ದಾಟುವಾಗ ಮಿನಿ ಲಾರಿಯೊಂದು ಹರಿದ ಪರಿಣಾಮ ಬಾಲಕ ಸಾವಿಗೀಡಾದ ಘಟನೆ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ನಡೆದಿದೆ.
ಸಿದ್ಧಾರ್ಥ ಹನುಮಂತ ಮಳ್ಳನ್ನವರ ಎಂಬ 2 ವರ್ಷದ ಬಾಲಕ ಸಾವಿಗೀಡಾಗಿದ್ದಾನೆ.
ಬಾಲಕನನ್ನು ಕಳೆದುಕೊಂಡ ಕುಟುಂಬದ ಆಕ್ರಂದಣ ಮುಗಿಲು ಮುಟ್ಟಿದೆ.
ಈ ಘಟನೆ ಕುರಿತು ಗೋಕಾಕ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.