ರಾಜ್ಯ

ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯಿಂದ ನೀತಿ ಸಂಹಿತೆ ಉಲ್ಲಂಘನೆ

ಸಭಾಪತಿಯಾಗಿ ಕಾರ್ಯನಿರ್ವಹಣೆಯಲ್ಲಿ ಬಸವರಾಜ ಹೊರಟ್ಡಿ ಗೋಲ್ ಮಾಲ್– ಆರೋಪ

ಧಾರವಾಡ prajakiran.com : ಬಿಜೆಪಿ ಅಭ್ಯರ್ಥಿ ಪರ ರ್ಯಾಲಿ ಮಾಡುವ ಮೂಲಕ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಸಚಿವರು ನೀತಿಸಂಹಿತೆ ಉಲ್ಲಂಘಿಸಿದ್ದಾರೆ.

ಈ ಕುರಿತು ಚುನಾವಣಾ ಆಯೋಗ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಧಾರವಾಡದಲ್ಲಿ ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ ಎಚ್ ನೀರಲಕೇರಿ ಆಗ್ರಹಿಸಿದರು.

ಧಾರವಾಡದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಭಾಪತಿಯಾಗಿ ಕಾರ್ಯನಿರ್ವಹಣೆಯಲ್ಲಿ ಬಸವರಾಜ ಹೊರಟ್ಡಿ ಸಾಕಷ್ಟು ಗೋಲ್ ಮಾಲ್ ಮಾಡಿದ್ದಾರೆ

ಇದರ ರಕ್ಷಣೆಗಾಗಿ ಬಿಜೆಪಿಗೆ ಹೋಗಿದ್ದಾರೆ ಅಷ್ಟೇ ಅಲ್ಲದೇ ಸೋಲಿನ ಭಯದಿಂದ ಜೆಡಿಎಸ್ ತ್ಯಜಿಸಿದ್ದಾರೆ ಎಂದರು.

ಸಭಾಪತಿ ಘನತೆ-ಗೌರವದ
ಸ್ಥಾನಮಾನ ಹೊಂದಿದೆ. ಈ ಸ್ಥಾನಮಾನವನ್ನು ಹೊರಟ್ಟಿ ದುರುಪಯೋಗ ಪಡೆಸಿಕೊಂಡಿದ್ದಾರೆ. ಈ ಕುರಿತು ತನಿಖೆ ನಡೆಸಲಿ ಎಂದು ಸರ್ಕಾರವನ್ನು ಆಗ್ರಹಿಸಿದರು.

ಕಳೆದ ನಲ್ವತ್ತು ವರ್ಷಗಳಿಂದ ಶಿಕ್ಷಕರ ಸಮಸ್ಯೆಗಳು ಜ್ವಲಂತ ವಾಗಿವೆ ಶಿಕ್ಷಕ ಸಮುದಾಯದವರನ್ನು ಹೆದರಿಸಿ-ಬೆದರಿಸಿ ಮತಗಳಿಸಿ ಜಯಗಳಿಸುವುದರಲ್ಲಿ ಯಶಸ್ವಿಯಾಗಿದ್ದಾರೆ

ಈ ಆಟ ಇನ್ನೂ ನಡೆಯುವುದಿಲ್ಲ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಬಸವರಾಜ ಗುರಿಕಾರ ಗೆಲವು ನಿಶ್ಚಿತ ಎಂದು ಹೇಳಿದರು.

ಸಂಘಟನೆಗಳು ಅನೇಕ ಹೋರಾಟಗಳನ್ನು ಮಾಡಿವೆ. ಕೆಲವಷ್ಟು ಹೋರಾಟಗಳಲ್ಲಿ ನಾನೂ ಭಾಗಿಯಾಗಿರುವೆ.

ನನಗೆ ಅರ್ಥವಾಗದ ಸಂಗತಿ ಎಂದರೆ ಸಮಸ್ಯೆಗಳು ಸಮಸ್ಯಗಳಾಗೇ ಉಳಿಯಲು ಕಾರಣವೇನು ಎಂದರು.

ಅನುದಾನರಹಿತ ಆಂಗ್ಲ ಮಾಧ್ಯಮ ಶಾಲೆಗಳಿಗೆ ಕನಿಷ್ಟ,
ವೇತನ, ಸೇವಾ ಭದ್ರತೆ,ಪಿಂಚಣಿ ಸಿಗದೇ ಇರುವದು. ಆ ಅನುದಾನ ರಹಿತರ ಸಂಘಟನೆ ಹೋರಾಟ ಮಾಡಿ ಸೊರಗಿ ಹೋಯಿತೇ ವಿನ: ಯಾವೊಬ್ಬ ವಿಧಾನ ಪರಿಷತ್ ಸದಸ್ಯರು ಈ ಬಗ್ಗೆ ಪಶ್ಚಾತ್ತಾಪ ಪಡುತ್ತಿಲ್ಲ.

ಆಗಿರುವ ಆದೇಶ ಜಾರಿ ಆಗದಿರುವದಕ್ಜೆ ಇವರೆಲ್ಲ ಆಡಳಿತ ಮಂಡಳಿಯ ಲಾಬಿಗೆ ಮಣೆದಿರುವರೇ ಎನ್ನುವ ಸಂಶಯವಿದೆ ಎಂದರು.

ಕಳೆದ ಎರಡು ದಶಕಗಳಿಂದ ಕಾಲ್ಪನಿಕ ಬಡ್ತಿ ಸಮಸ್ಯೆ ಇನ್ನೂ ಜೀವಂತವಾಗೇ ಇದೆ.
ಹೊಸ ಪಿಂಚಣಿಗಾಗಿ ಕರಡು ಜಾರಿಯಾದಾಗ ಯಾವ ಸಂಘಟನೆಯ ನಾಯಕರೂ ಆಕ್ಷೇಪಣೆ ಸಲ್ಲಿಸದೇ ಈಗ ಹಳೆ ಪಿಂಚಣಿ ಭರವಸೆ ನೀಡುತ್ತಿರುವದು ಆಶ್ಚರ್ಯ.

ಅನುದಾನಿತ ಶಿಕ್ಷಣ ಸಂಸ್ಥೆಗಳ ಹದಿನಾರು ವರ್ಷಗಳ ವಂತಿಗೆ ತುಂಬುವವರಾರು?.

ಅಂದು ಖಾಸಗೀ
ಆಡಳಿತ ಮಂಡಳಿಗಳು ವಂತಿಗೆ ತುಂಬುವದು ಕಷ್ಟ ಎಂದು ಅಳಲು ನೋಡಿಕೊಂಡಾಗ ಆಡಳಿತ ಮಂಡಳಿಯವರ ಪರ ನಿಂತು ಸರಕಾರವೇ ಭರಿಸಲಿ ಎಂದು ಸರಕಾರದ ಮೇಲೆ ಒತ್ತಡ ತಂದ ಶಿಕ್ಷಕ ಪ್ರತಿನಿಧಿಗಳು ಯಾರಾದರೂ ಇದ್ದಾರೆಯೇ ಎಂದು ಕೇಳಿದರು.

ಈ ಬಗ್ಗೆ ಭರವಸೆ ನೀಡುತ್ತಲೇ ಎರಡೆರಡು ಬಾರಿ ವಿಧಾನ ಪರಿಷತ್ ಸದಸ್ಯರಾದವರು ಈಗ ಮತ್ತೆ ಚುನಾವಣೆಗೆ ಬಂದಿದ್ದಾರೆ.

ಇದರಲ್ಲಿ ಹಲವರು ಸರಕಾರದ ಭಾಗವಾಗೇ ಇದ್ದರು ಎಂದರು.
ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಆಗಿರುವ ಹುದ್ದೆ ತುಂಬಲು( ನಿವೃತ್ತಿ, ನಿಧನ, ಸ್ವಯಂನಿವೃತ್ತಿಯಿಂದ ಖಾಲಿ ಆಗಿರುವ) ಹೋರಾಟ ಮಾಡು ಸ್ಥಿತಿಗೆ ಸಂಘಟನೆಗಳು ಬಂದಿರುವದು ದುರ್ದೈವ‌.

ಹುದ್ದೆ ಖಾಲಿ ಆಗುತ್ತಲೇ ಹುದ್ದೆ ತುಂಬುವ ಕಾಲ ಒಂದಿತ್ತು.
ಸರಕಾರೀ ನೌಕಕರಿಗೆ ಸಿಗುವ ಸೌಲಭ್ಯಗಳು ಏಕಕಾಲದಲ್ಲಿ ವಿಸ್ತರಣೆ ಆಗಲು ಆದೇಶದಲ್ಲಿ ಒಂದು ವಾಕ್ಯ ಇರುತ್ತಿತ್ತು.

ಆದರೆ ಅದು ಇಂದು ಇಲ್ಲವಾಗಿ ವಿಸ್ತರಣೆಗಾಗಿ ಹೋರಾಟ ಮಾಡಿ ಅದುವೇ ಒಂದು ಸಾಧನೆ ಎಂದು ಹೇಳುವಂತಾಗಿದೆ.

(ಸರಕಾರಿ ನೌಕರರಿಗೆ ದೊರೆತ ಸ್ಥಗಿತ ಬಡ್ತಿಗಳಿಗಾಗಿ ನಾಲ್ಕು ವರ್ಷ ಶಿಕ್ಷಕರು ಹೋರಾಡಿದರು.

ಆದರೆ ೨೦೧೬ ರಲ್ಲಿ ವಿಸ್ತರಣೆಯಾದಾಗ ಭವಿಷ್ಯಾನ್ವಯವಾಗಿ ಎಂದು ನಮೂದಾಗಿದ್ದರಿಂದ ೨೦೧೨ ರಿಂದ ೨೦೧೬ ರ ವರೆಗೆ ನಿವೃತ್ತಿ ಆದವರಿಗೆ ಸಿಗಲೇ ಇಲ್ಲ.

ಕೋರ್ಟ್ ಗೆ ಹೋಗಿ ಗೆದ್ದರೂ ಕಂಟೆಪ್ಟ ಮಾಡಿ ಎಂಬ ಸಲಹೆ ಶಾಸಕರದು. ಮಲೀನವಾಗುತ್ತಿರುವ ಶಿಕ್ಷಣ ರಂಗದ ಬಗ್ಗೆ ಯಾರೂ ಚಕಾರ ಎತ್ತುತ್ತಿಲ್ಲ ಎಂದರು.

ಒತ್ತಡದಲ್ಲಿರುವ ಶಿಕ್ಷಕರ ಕಾಳಜೀ ಇಲ್ಲ. ಅಂಕ ಆಧಾರಿತ ಶಿಕ್ಷಣ ಆಗುತ್ತಿರುವ ಬಗ್ಗೆ ಆತಂಕ ವ್ಯಕ್ತ ಮಾಡಿ ಗುಣಮಟ್ಟದ ಶಿಕ್ಷಣದ ಬಗ್ಗೆ ನಮ್ಮ ಶಾಸಕರ ಕಾಳಜೀ ಇಲ್ಲ.

ಸರಕಾರವೇ ಇಂದು ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸುತ್ತಿರುವಾಗ ದಶಕಗಳಿಂದ ನಡೆದು ಬಂದ ಆಂಗ್ಲ ಮಾಧ್ಯಮ ಶಾಲೆಗಳಿಗೆ ಅನುದಾನ ಏಕೆ ನೀಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೋವಿಡ್ ಸಂದರ್ಭದಲ್ಲಿ ಅನುದಾನರಹಿತರ ಗೋಳಿಗೆ ಸಂಘಟನೆಗಳೆಲ್ಲ ಹೋರಾಟ ಮಾಡಿದಾಗ ೫೦೦೦ ರೂಪಾಯಿ ಧನಸಹಾಯ ಬಂತು ( ಹತ್ತಿಪ್ಪತ್ತು ತಿಂಗಳು ವೇತನ ಇರಲಿಲ್ಲ) ಅದನ್ನು ನಾನೇ ಕೊಡಿಸಿದೆ ಎಂದು ಬಿಂಬಿಸುವ ಶಾಸಕರು ಕನಿಷ್ಠ ವೇತನ ಕೊಡಿಸಬಹುದಾಗಿತ್ತು.

ಅತಿಥಿ ಶಿಕ್ಷಕರು,ಅತಿಥಿ ಉಪನ್ಯಾಸಕರ ಆಧಾರಿತವಾದ ಶಿಕ್ಷಣ ಅದೆಷ್ಟು ಫಲ ನೀಡಬಹುದು ಎಂಬ ಬಗ್ಗೆ ನಮ್ನ ಪ್ರತಿನಿಧಿಸುವವರು ಆಲೋಚಿಸಿ ಖಾಯಂ ಮಾಡುವ ಬಗ್ಗೆ ಆಲೋಚನೆ ಮಾಡಲೇ ಇಲ್ಲ.

ಓಪಿಎಸ್ ( OPS) ಜಾರಿಯಾದರೂ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಅದು ನಿಲುಕುವದು ಕಷ್ಟ….ಆದರೂ ಆ ಭರವಸೆ ನೀಡುತ್ತಾ ನಡೆದಿರುವದು ಯಾಕೆ ಎಂದರು.

ಯಾವ ಇಲಾಖೆಗೂ ಇರದ ಕೌನ್ಸಿಲಿಂಗ ಪದ್ದತಿಯ ವರ್ಗಾವಣೆ ಶಿಕ್ಷಕರಿಗೆ ಮಾತ್ರ ಜಾರಿಯಾಗಿ ವರ್ಗಾವಣೆ ಕಬ್ಬಿಣದ ಕಡಲೆ ಆಗಿರುವದು ಎಲ್ಲರೂ ಬಲ್ಲ ಸಂಗತಿ.

2002 ರಲ್ಲಿ ಪ್ರತಿ ಪ್ರಾಥಮಿಕ ಶಾಲೆಗೆ ಒಬ್ಬ ಶಾರೀರಿಕ ಶಿಕ್ಷಕ ಹಾಗೂ ಚಿತ್ರಕಲಾ ಶಿಕ್ಷಕ ರನ್ನು ನೇಮಕ ಮಾಡಲು ಒತ್ತಾಯಿಸಿ ಹೋರಾಡಲಾಗಿತ್ತು‌.

ಅದಕ್ಕೆ ಫಲವೂ ಸಿಕ್ಕಿತ್ತು…ಮುಂದೆ ನಮ್ಮವರೇ ಶಿಕ್ಷಣ ಸಚಿವರಾದರೂ ಕಾರ್ಯಗತವಾಗಲಿಲ್ಲ‌ ಪರಿಣಾಮವಾಗಿ ಚಿತ್ರಕಲಾ ಹಾಗೂ ಸಿಪಿಇಡಿ ಶಾಲೆಗಳೇ ಬಂದಾದವು,

ಶಾರೀರಿಕ ಶಿಕ್ಷಣ ಶಿಕ್ಷಕರನ್ನು ಸಹಾಯಕ ಶಿಕ್ಷಕರಾಗಿ ಪರಿಗಣಿಸಿ ಮುಖ್ಯಾದ್ಯಾಪಕ ಹುದ್ದೆ ನೀಡುವ ಬಗ್ಗೆ ರಚಿತ ವೈದ್ಯನಾಥನ್ ವರದಿ ಮೂಲೆ ಕಂಡಿತು..ಅದಕ್ಕಾಗಿ ಪ್ರಯತ್ನ ಮಾಡುವ ಭರವಸೆ ಈಗಲೂ ನೀಡುತ್ತಿದ್ದಾರೆ. ಇದು ವಿಪರ್ಯಾಸ ಎಂದರು.

ಕಾಂಗ್ರೆಸ್ ಮುಖಂಡರಾದ ಕುಬೇರಪ್ಪ ಮಾತನಾಡಿ, ಹೊರಟ್ಟಿ ಪ್ರಾಮಾಣಿಕವಾಗಿ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಿಲ್ಲ ಈ ಬಾರಿ ಶಿಕ್ಷಕರು ಬದಲಾವಣೆ ಬಯಸಿದ್ದು ಬಸವರಾಜ ಗುರಿಕಾರ ಗೆಲವು ನಿಶ್ಚಿತವೆಂದರು.

ಪತ್ರಿಕಾಗೋಷ್ಠಿಯಲ್ಲಿ ಆನಂದ ಕುಲಕರ್ಣಿ ಇನ್ನಿತರು ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *