ಬೆಂಗಳೂರು prajakiran.com : ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರನ್ನು ರಾಜ್ಯದ ಬಿಜೆಪಿ ಸರಕಾರ ವರ್ಗಾವಣೆ ಮಾಡಿದೆ.
ಅವರ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿ ಕಮಲ್ ಪಂಥ್ ಅವರನ್ನು ನಿಯೋಜಿಸಿ ಆದೇಶ ಹೊರಡಿಸಿದೆ.
ಭಾಸ್ಕರ್ ರಾವ್ ಅವರನ್ನು ರಾಜ್ಯ ಆಂತರಿಕ ಭದ್ರತಾ ವಿಭಾಗದ ಎಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ.
ಭಾಸ್ಕರ್ ರಾವ್ ಅವರನ್ನು ಕೋವಿಡ್ ಸಂದರ್ಭದಲ್ಲಿ ದಿಢೀರ್ ಆಗಿ ವರ್ಗಾವಣೆ ಆಗಿರುವುದು ಭಾರೀ ಅಚ್ಚರಿ ಹಾಗೂ ಕುತೂಹಲ ಕೆರಳಿಸಿದ್ದು, ಪರ ವಿರೋಧ ಚರ್ಚೆಗೆ ಅವಕಾಶ ಮಾಡಿಕೊಟ್ಟಿದೆ.
1990ರ ಐಪಿಎಸ್ ಬ್ಯಾಚ್ ನ ಅಧಿಕಾರಿಯಾಗಿರುವ ಕಮಲ್ ಪಂಥ್ ಅವರು ಸದ್ಯ ರಾಜ್ಯ ಗುಪ್ತದಳದ ಎಡಿಜಿಪಿಆಗಿದ್ದರು.
ಗುಪ್ತದಳದ ಎಡಿಜಿಪಿ ಆಗಿ ಸಿಐಡಿಯಲ್ಲಿ ಬಿ. ದಯಾನಂದ್ ಅವರನ್ನು ವರ್ಗಾಯಿಸಲಾಗಿದೆ.