ಕಲಘಟಗಿ Prajakiran.com : ಪರೀಕ್ಷೆ ಪೇ ಚರ್ಚಾದಲ್ಲಿ ಭಾಗವಹಿಸಿದ ವಿದ್ಯಾರ್ಥಿನಿಗೆ ಕಲಘಟಗಿ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಜನೆವರಿ 16 ರಂದು 2021 ರಂದು ಪರೀಕ್ಷೆ ಪೇ ಚರ್ಚಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಭಾಗವಹಿಸಿದ ಕರ್ನಾಟಕದ 40 ವಿದ್ಯಾರ್ಥಿಗಳಲ್ಲಿ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸರಕಾರಿ ಆದರ್ಶ ವಿದ್ಯಾಲಯ ದಾಸ್ತಿಕೊಪ್ಪದ ವಿದ್ಯಾರ್ಥಿನಿಯಾದ ಸಾನಿಯಾ ಗುಡಗಂಟಿ ಎಂಬ ವಿದ್ಯಾರ್ಥಿನಿಯು ಭಾಗವಹಿಸಿ ನಮ್ಮ ಧಾರವಾಡ ಜಿಲ್ಲೆಯ ಕೀರ್ತಿ ಪತಾಕೆ ಹಾರಿಸಿದ ಕಾರಣ ಕಲಘಟಗಿ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಕುಮಾರಿ ಸಾನಿಯಾ ಗುಡಗಂಟಿಯವರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ ಅಧ್ಯಕ್ಷರಾದ ಸುನೀತಾ ಮ್ಯಾಗನಮನಿ, ಉಪಾಧ್ಯಕ್ಷರಾದ ಚಂದ್ರಗೌಡ ಪಾಟೀಲ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಈರಯ್ಯ ಸಿದ್ದಾಪುರಮಠ, ಎಇಓ ಅಧಿಕಾರಿ ಎಮ್ ಎಸ್ ಮೇಟಿ ಸೇರಿದಂತೆ ಹಲವರು ಭಾಗವಹಿಸಿದರು.