ಕಲಬುರಗಿ prajakiran.com : ಮಾಜಿ ಸಚಿವರಾದ ಕೆ.ಬಿ. ಶಾಣಪ್ಪ ಅವರು ಭಾನುವಾರ ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಕರೋನಾ ರೋಗಕ್ಕೆ ಬಲಿಯಾಗಿದ್ದಾರೆ.
ಶಾಣಪ್ಪ ಅವರು ಹಿರಿಯ ರಾಜಕೀಯ ಮುತ್ಸದ್ಧಿಯಾಗಿದ್ದರು.
ಅವರು ಶಹಬಾದ್
ಕಾರ್ಮಿಕ ಧುರೀಣರಾಗಿ, ಮೊದಲು
ಕಮ್ಯುನಿಸ್ಟ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.
ಆನಂತರ ಜನತಾ ಪರಿವಾರ, ಬಿಜೆಪಿ ಸೇರಿದ್ದರು. ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ, ಸಚಿವರಾಗಿ , ರಾಜ್ಯಸಭಾ ಸದಸ್ಯರಾಗಿ ಅಪಾರವಾಗಿ ಜನಸೇವೆ ಮಾಡಿದ್ದರು.
ಧೀಮಂತ ನಾಯಕರಾಗಿದ್ದ ಅವರು ಸಂಘಟನಾ ಚತುರರು, ವಾಗ್ಮಿಗಳಾಗಿದ್ದರು.
ಅವರ ಅಗಲಿಕೆಯಿಂದ ದುಡಿಯುವ ವರ್ಗಕ್ಕೆ, ರಾಜಕೀಯ ಕ್ಷೇತ್ರಕ್ಕೆ, ಮತ್ತು ವಿಶೇಷವಾಗಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಅಪಾರ ನಷ್ಟ ಉಂಟಾಗಿದೆ ಎಂದು ಅನೇಕರು ಕಂಬನಿ ಮಿಡಿದಿದ್ದಾರೆ.