ನವದೆಹಲಿ prajakiran.com : ಸಚಿವ ಶಶಿಕಲಾ ಜೊಲ್ಲೆ ತಮ್ಮ ಪತಿ ಹಾಗು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಜೊತೆಗೆ ದಿಢೀರ ಆಗಿ ದೆಹಲಿ ದೌಡಾಯಿಸಿದ್ದಾರೆ.
ಇದೇ ಸಂದರ್ಭದಲ್ಲಿ ದೆಹಲಿಯ ಕರ್ನಾಟಕ ಭವನದಲ್ಲಿ ಬೀಡು ಬಿಟ್ಟಿರುವ ಡಿಸಿಎಂ ಲಕ್ಷ್ಮಣ ಸವದಿಅವರನ್ನು ಭೇಟಿಮಾಡಿ ಮಾತುಕತೆ ನಡೆಸಿರುವುದು ತೀವ್ರ ಕುತೂಹಲ ಕೆರಳಿಸಿದೆ.
ಇದರಿಂದಾಗಿ ರಾಜ್ಯ ಬಿಜೆಪಿಯಲ್ಲಿ ಪಕ್ಷದ ಆಂತರಿಕ ಚಟುವಟಿಕೆಗಳು ಇನ್ನಷ್ಟು ಗರಿ ಗೆದರುವಂತೆ ಮಾಡಿವೆ.
ಹಾಗಿದ್ದರೆ ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ, ಸಚಿವ ಸಂಪುಟ ಪುನರ್ ರಚನೆ ಕುರಿತು ಬೆಳವಣಗೆಗಳು ನಡೆದಿವೆಯಾ ಎಂಬುದು ತೀವ್ರ ಕುತೂಹಲ ಕೆರಳಿದೆ.
ವರಿಷ್ಟರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದಅಣ್ಣಾಸಾಹೇಬ ಜೊಲ್ಲೆ, ನಾನು ಕೇಂದ್ರ ಸಾರಿಗೆ ಸಚಿವ ಗಡ್ಕರಿ ಭೇಟಿಗೆ ಬಂದಿದ್ದೆ. ಮೇಡಂ ಕೇಂದ್ರ ಸಚಿವರನ್ನು ಭೇಟಿ ಮಾಡಲು ಬಂದಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಇದಕ್ಕೆಯಾವುದೇ ರಾಜಕೀಯ ಮಹತ್ವವಿಲ್ಲ. ಬಿಜೆಪಿಯಲ್ಲಿ ಯಾವುದೇ ಬೆಳವಣಿಗೆ ನಡೆದಿಲ್ಲ. ಎಲ್ಲಾ ಉಹಾ ಪೋಹಗಳು. ನಾವು ಮಾಧ್ಯಮಗಳಲ್ಲಿ ಮಾತ್ರ ನೋಡಿದ್ದೇವೆ. ಆರಂಭದಿಂದಲೂ ಸಚಿವೆ ಶಶಿಕಾಲ ಜೊಲ್ಲೆ ಅವರನ್ನು ಕೈ ಬಿಡುವ ಕುರಿತು ಚರ್ಚೆ ನಡೆದಿದೆ.
ನಾವು ನಮ್ಮ ಇಲಾಖೆ ಕೆಲಸಕ್ಕೆ ಬಂದಿದ್ದೆವೆ. ಸಚಿವ ಸಂಪುಟದ ಸಭೆ ಇರುವುದರಿಂದ ಕೇಂದ್ರಸಚಿವರಾದ ಜೋಶಿ, ಸ್ಮೃತಿ ಇರಾನಿ ಭೇಟಿಗಾಗಿ ಬಂದಿರುವುದು ಎಂದು ಹೇಳಿದರು.
ಇದೇ ವೇಳೆ ಕರ್ನಾಟಕ ಭವನದಲ್ಲಿ ತಂಗಿದ್ದ ಡಿಸಿಎಂ ಲಕ್ಷ್ಮಣ ಸವದಿಯವರನ್ನು ಭೇಟಿ ಮಾಡಿದ್ದೇವೆ. ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಷಯವಿಲ್ಲ. ಹೈಕಮಾಂಡ್ ಮಟ್ಟದಲ್ಲಿ ಆಗಲಿ ರಾಜ್ಯದಲ್ಲಿ ಚರ್ಚೆ ಇಲ್ಲ. ಯಾರೂ ಕೂಡ ವಿಚಾರ ಮಾಡಿಲ್ಲ ಎಂದು ಹೇಳಿದರು.
ಯಾರು ಈ ಬಗ್ಗೆ ಹೇಳುತ್ತಾ ಇಲ್ಲ. ವಿಷಯ ಪ್ರಸ್ತಾಪಿಸಿಲ್ಲ. ಆದರೂ ಹೈಕಮಾಂಡ್ ನಿರ್ಧಾರಕ್ಕೆ ಬದ್ದ. ಸಚಿವ ಸ್ಥಾನ ಹೋಗುವ ಆತಂಕವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಲಾಕ್ ಡೌನ್ ಹಿನ್ನಲೆಯಲ್ಲಿ ದೆಹಲಿಗೆ ಬರಲು ಆಗಲು ಆಗಿರಲಿಲ್ಲ. ಹೀಗಾಗಿ ಈಗಅವರ ಸಮಯ ಖಾತ್ರಿಪಡಿಸಿಕೊಂಡು ಬಂದಿದ್ದೇವೆ ಎಂದು ಬೆಳಗಾವಿ ರಾಜಕೀಯಕುರಿತು ಪ್ರಸ್ತಾಪಿಸಿದರು.