ಹುಬ್ಬಳ್ಳಿ prajakiran.com : ಕೆಪಿಸಿಸಿಅಧ್ಯಕ್ಷ ಡಿ.ಕೆ. ಶಿವಕುಮಾರ್ ತಪ್ಪು ಮಾಡದಿದ್ದರೆ ಯಾರಿಗೂ ಹೆದರಬೇಕಿಲ್ಲ. ಲೆಕ್ಕಪತ್ರ ಸರಿಯಿದ್ದರೆ ಸಿಬಿಐಗೆ ಹೆದರಬೇಕಿಲ್ಲ ಎಂದು ಹುಬ್ಬಳ್ಳಿಯಲ್ಲಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದಾರೆ.
ಸಿಬಿಐ ಸ್ವತಂತ್ರ ಸಂಸ್ಥೆ, ಸುಮ್ಮನೆ ಯಾರ ಮನೆಯ ಮೇಲೂ ದಾಳಿ ಮಾಡಲ್ಲಾ. ಎರಡು ಮೂರು ತಿಂಗಳು ದಾಖಲೆ ಕಲೆಹಾಕಿ, ಪೂರ್ವ ಸಿದ್ಧತೆಗಳೊಂದಿಗೆ ದಾಳಿ ಮಾಡುತ್ತಾರೆ.
ಯುಪಿಎ ಸರ್ಕಾರವಿದ್ದಾಗ ಜಗನ್ಮೋಹನ್ ರೆಡ್ಡಿಯನ್ನು ಜೈಲಲ್ಲಿ ಇಟ್ಟಿದ್ರು. ಅಮಿತ್ ಷಾ ಮೇಲೆ ಸುಳ್ಳು ಕೇಸ್ ಹಾಕಿದ್ರು.
ಆಗ ನಾವು ದೇಶದ ತುಂಬಾ ಹೋರಾಡಿರಲಿಲ್ಲ ಎಂದು ತಿರುಗೇಟು ನೀಡಿದರು. ಅಮಿತ್ ಷಾ ಕಾನೂನು ಹೋರಾಟ ನಡೆಸಿದ್ದಾರೆ. ಈಗ ದೇಶದ ಗೃಹ ಮಂತ್ರಿ ಆಗಿದ್ದಾರೆ.
ಕಾಂಗ್ರೆಸ್ನವರು ದೇಶ ಲೂಟಿ ಮಾಡಿದ್ರು, ಈಗ ಒಂದೊಂದೆ ಪ್ರಕರಣಗಳು ಹೊರಗೆ ಬರುತ್ತಿವೆ. ಡಿಕೆಶಿ ಕಾನೂನು ಹೋರಾಟ ಮಾಡಲಿ, ಸಂಪಾದನೆ ಕುರಿತು ದಾಖಲೆಗಳನ್ನು ಕೊಡಲಿ ಎಂದು ಸವಾಲು ಹಾಕಿದರು.
ತಪ್ಪಿಲ್ಲದಿದ್ದರೆ ಆರೋಪ ಮುಕ್ತರಾಗಿ ಹೊರಗೆ ಬರಲಿ. ಬೆಳಗ್ಗೆಯಿಂದ ಸಂಜೆವರೆಗೆ ರಾಜಕೀಯ ಪ್ರೇರಿತ ಅಂದ್ರೆ ಜನ ನಂಬಲ್ಲಾ. ಡಿಕೆಶಿ ಅರೆಸ್ಟ್ ಮಾಡಿಸಿದ್ರೆ ನಾವು ಉಪ ಚುನಾವಣೆಯಲ್ಲಿ ಗೆಲ್ತೀವಾ? ಎಂದು ಪ್ರಶ್ನಿಸಿದರು.
ಉಪಚುನಾವಣೆ, ರಾಜಕೀಯ ಪ್ರೇರಿತ ಅನ್ನೋದೆಲ್ಲಾ ಸುಳ್ಳು. ಡಿ.ಕೆ. ಶಿವಕುಮಾರ್ ನಾಟಕ ಮಾಡುವುದನ್ನು ಬಿಡಬೇಕು ಎಂದು ಶೆಟ್ಟರ್ ಕುಟುಕಿದರು.