ಧಾರವಾಡ prajakiran.com : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಪ್ತ ಧಾರವಾಡ ಜಿಲ್ಲೆಯ ಯು.ಬಿ. ಶೆಟ್ಟಿ ಹಾಗೂ ಸೀತಾರಾಮ ಶೆಟ್ಟಿ ಬ್ರದರ್ಸ್ ಮನೆ ಮೇಲೆ ನಿನ್ನೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ತಡರಾತ್ರಿವರೆಗೆ ಪರಿಶೀಲನೆ ನಡೆಸಿದ್ದಾರೆ.
ಗುರುವಾರ ಬೆಳ್ಳಂಬೆಳಿಗ್ಗೆ ಧಾರವಾಡದ ದಾಸನಕೊಪ್ಪ ವೃತ್ತದ ಬಳಿಯ ಯು.ಬಿ. ಶೆಟ್ಟಿ ಮನೆ ಹಾಗೂ ವಿನಾಯಕ ನಗರದಲ್ಲಿರೋ ಸೀತಾರಾಮ ಶೆಟ್ಟಿ ಮನೆ ಮೇಲೆ ಏಕಕಾಲಕ್ಕೆ ಐಟಿ ದಾಳಿ ಮಾಡಲಾಗಿತ್ತು.
ಹತ್ತಕ್ಕೂ ಹೆಚ್ಚು ಇನ್ನೋವಾ ವಾಹನಗಳಲ್ಲಿ ಬಂದಿದ್ದ ಇಪ್ಪತ್ತಕ್ಕೂ ಹೆಚ್ಚು ಅಧಿಕಾರಿಗಳ ತಂಡ ತಡರಾತ್ರಿಯವರೆಗೆ ಮಹತ್ವದ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡು ಪರಿಶೀಲನೆ ನಡೆಸಿದರು.
ಡಿಕೆಶಿ ಆಪ್ತರಾಗಿರೋ ಯು.ಬಿ ಶೆಟ್ಟಿ ಹಾಗೂ ಸೀತಾರಾಂ ಶೆಟ್ಟಿ ಅವರ ಮನೆಯಲ್ಲಿ
ಅಪಾರ ಪ್ರಮಾಣದ ಚಿನ್ನಾಭರಣ ಹಾಗೂ ವಜ್ರ ಪತ್ತೆಯಾಗಿದೆ.
ಹೀಗಾಗಿ ವಜ್ರದ ಗುಣಮಟ್ಟ ಪರೀಕ್ಷೆಗೆ ಆಭರಣ ತಯಾರಕನಿಗೆ ಬುಲಾವ್ ನೀಡಿದ್ದರು.
ಸೀತಾರಾಮ ಶೆಟ್ಟಿ ಮನೆಯಲ್ಲಿ ಪತ್ತೆಯಾದ ವಜ್ರದ ವಿಚಾರಣೆ ನಡೆಸಲಾಗಿತ್ತು.
ಡಿಕೆಶಿ ಆಪ್ತ ಶೆಟ್ಟಿ ಸಹೋದರರ ಮನೆ ಮೇಲೆ ಐಟಿ ದಾಳಿ ನಂತರ ಪೊಲೀಸ್ ಕಾವಲು ನಿಯೋಜಿಸಲಾಗಿತ್ತು.
ಮನೆಯ ಆವರಣದಲ್ಲಿ ಹಾಗೂ
ಮನೆಯ ಹೊರ ಭಾಗದಲ್ಲಿಯೂ ಪೊಲೀಸ್ ಕಾವಲು ಹಾಕಲಾಗಿದೆ.
ಶುಕ್ರವಾರವೂ ಕೂಡ ಸಾಕ್ಷಿಗಳಿಗೆ ಬರಲು ಅಧಿಕಾರಿಗಳ ಸೂಚನೆ ನೀಡಿದ್ದಾರೆ.
ಇಬ್ಬರು ಸಾಕ್ಷಿಗಳಿಗೆ ಐಟಿ ಅಧಿಕಾರಿಗಳ ಸೂಚನೆ ಇದೆ ಎಂದು ಗೊತ್ತಾಗಿದೆ.
ಸಾಕ್ಷಿಗಳ ಮುಂದೆ ಶೆಟ್ಟಿ ವಿಚಾರಣೆ ನಡೆಸಲಿದ್ದಾರೆ.
ಶುಕ್ರವಾರದಂದು ಕೂಡ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಪರಿಶೀಲನೆ ಮುಂದುವರೆಸಿದ್ದಾರೆ.
ಬೆಳ್ಳಗೆಯಿಂದಲೇ ತನಿಖೆ ಆರಂಭಗೊಂಡಿದ್ದು, ಯು.ಬಿ. ಶೆಟ್ಟಿಯವರ ಮನೆಗೆ ಅಧಿಕಾರಿಗಳು ಬಂದಿದ್ದು, ತನಿಖೆ ಆರಂಭಿಸಿದ್ದಾರೆ.