ಧಾರವಾಡ prajakiran. com : ಧಾರವಾಡ ಜಿಲ್ಲೆಯ ಜಿಲ್ಲಾ ಕೇಂದ್ರ ಕಚೇರಿ ಧಾರವಾಡ ಆಗಿದ್ದು, ಇತ್ತೀಚಿನ ಕೆಲ ವರ್ಷಗಳಿಂದ ಕೆಲವು ನಿರ್ಣಾಯಕ ಹಾಗೂ ನಿರ್ಣಯ ತೆಗೆದುಕೊಳ್ಳುವ ಸಭೆಗಳು ಜಿಲ್ಲಾ ಕೇಂದ್ರದಲ್ಲಿ ನಡೆಯುತ್ತಿಲ್ಲ ಎಂದು ರಾಜ್ಯ ಜೆಡಿಎಸ್ ಮುಖಂಡ ಗುರುರಾಜ್ ಹುಣಸೀಮರದ ಆರೋಪಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಇತ್ತೀಚಿನ ಬಹುತೇಕ ಎಲ್ಲ ಇಲಾಖೆಯ ಪ್ರಮುಖ ಜಿಲ್ಲಾ ಮಟ್ಟದ ಸಭೆಗಳು ಹುಬ್ಬಳ್ಳಿ ಏರ್ಪೋರ್ಟ್, ದೊಡ್ಡ ಹೊಟೇಲ್ ಹಾಗೂ ಕೇಂದ್ರ ಹಾಗೂ ರಾಜ್ಯ ಸಚಿವರ ಮನೆಯಲ್ಲಿಯೇ ಸಭೆಗಳು ನಡೆಯುತ್ತಿರುವುದು ಶಿಷ್ಟಾಚಾರ ಸ್ಪಷ್ಟ ಉಲ್ಲಂಘಣೆಯಾಗಿದೆ. ಐಎಎಸ್ ಶ್ರೇಣಿಯ ದಕ್ಷ ಅಧಿಕಾರಿಯಾಗಿರುವ ನಿತೇಶ್ ಪಾಟೀಲರು ಈ ರೀತಿ ಕರೆದವರ ಮನೆಯಲ್ಲಿ ಸಭೆ ಮಾಡುತ್ತಿರುವುದು ಅವರ ಜಿಲ್ಲಾಧಿಕಾರಿ ಹುದ್ದೆಗೆ ಶೋಭೆ ತರುವುದಿಲ್ಲ. ನಮ್ಮ ವಿನಂತಿ ಎಂದರೆ ಜಿಲ್ಲಾ ಮಟ್ಟದ ಸಭೆಯನ್ನು ಜಿಲ್ಲಾ ಧಾರವಾಡ ಕೇಂದ್ರದಲ್ಲಿ ಹಾಗೂಆಯಾ ತಾಲೂಕು ಕೇಂದ್ರಗಳಲ್ಲಿ ಸಭೆಗಳನ್ನು ತಾಲೂಕು ಮಟ್ಟದಲ್ಲಿ ಮಾಡುವ ಮೂಲಕ ಗೌರವಯುತ ಸ್ಥಾನದಲ್ಲಿರುವ ತಾವು ಕನಿಷ್ಟ ಮಟ್ಟದ ಶಿಷ್ಟಾಚಾರವನ್ನು ಪಾಲನೆ ಮಾಡಬೇಕು. ಇಲ್ಲದೇ ಹೋದರೇ ಜಿಲ್ಲಾಧಿಕಾರಿಯ ಹುದ್ದೇಗೆ ಧಾರವಾಡ ಜಿಲ್ಲಾಧಿಕಾರಿಗಳಿಗೆ ಅಗೌರವ ತೋರಿದಂತಾಗುತ್ತದೆ ಎಂಬುದು ನಮ್ಮ ಸಲಹೆಯಾಗಿದೆ.