ಬೆಳಗಾವಿ prajakiran.com : ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿಯಲ್ಲಿ ಮನೆ ಕುಸಿದು ಒಂದೇ ಕುಟುಂಬದ ಎಳು ಜನರ ಮೃತಪಟ್ಟ ಘಟನೆ ನಡೆದಿದೆ.
ಐವರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದರೆ, ಇನ್ನಿಬ್ಬರು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಅಸು ನೀಗಿದ್ದಾರೆ.
ಈ ಭೀಕರ ಘಟನೆ ಗೆ ಸಂಭಂದಿಕರ ಆಕ್ರಂದನ ಮುಗಿಲು ಮುಟ್ಟಿದೆ.
ಬುಧವಾರ ಸಂಜೆ ಸುರಿದ ಧಾರಾಕಾರ ಮಳೆಯಿಂದಾಗಿ ಮಣ್ಣಿನ ಮನೆಯ ಗೋಡೆ ಕುಸಿದಿದೆ.
ಇದರಿಂದಾಗಿ ಅವಶೇಷಗಳಡಿ ಸಿಲುಕಿ ಐವರು ಸಾವಿಗೀಡಾಗಿದ್ದಾರೆ.
ಮೂವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಅವರಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ.
ಅರ್ಜುನ ಖನಗಾವಿ, ಸಾತವ್ವ ಖನಗಾವಿ, ಗಂಗವ್ವ ಭೀಮಪ್ಪ ಖನಗಾವಿ, ಸವಿತಾ ಭೀಮಪ್ಪ ಖನಗಾವಿ, ಲಕ್ಷ್ಮಿ ಅರ್ಜುನ ಖನಗಾವಿ, ಪೂಜಾ ಅರ್ಜುನ ಖನಗಾವಿ (8 ವರ್ಷ) ಹಾಗೂ ಪಕ್ಕದ ಮನೆಯ ಕಾಶವ್ವ ವಿಠ್ಠಲ ಕೊಲ್ಯಪ್ಪನವರ್ (8) ಮೃತಪಟ್ಟಿದ್ದಾರೆ.
ಮಾಹಿತಿಯನ್ನು ಅರಿತು ಘಟನಾ ಸ್ಥಳಕ್ಕೆ ದೌಡಾಯಿಸಿದ ಹಿರೇಬಾಗೇವಾಡಿ ಪೊಲೀಸರು ರಕ್ಷಣಾ ಕಾರ್ಯ ಕೈಗೊಂಡರು.