ಬೆಂಗಳೂರು prajakiran.com : ಸೋಮವಾರ ನಡೆಸಿದ ಸಭೆಯಲ್ಲಿ ಪ್ರತಿಪಕ್ಷಗಳ ನಾಯಕರು ಕೆಲವು ಸತ್ಯ ಹೇಳಿದ್ದಾರೆ, ಕೆಲವೊಂದು ಖೇದಕರ ವಿಷಯಗಳನ್ನು ಸಹ ಹೇಳಿದ್ದಾರೆ.
ಇದೊಂದು ದೊಡ್ಡ ಸಾಂಕ್ರಾಮಿಕ ರೋಗವಾಗಿದ್ದು ಇದನ್ನು ಎಲ್ಲರೂ ಪರಿಶ್ರಮದಿಂದ ತೊಡೆದು ಹಾಕಬೇಕಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಪ್ರತಿಪಕ್ಷಗಳು ಹೇಳಿದ್ದನ್ನೆಲ್ಲಾ ಅಲ್ಲಗಳೆಯಲು ಆಗುವದಿಲ್ಲ. ಬಹಳ ಅಭಿವೃದ್ಧಿ ಹೊಂದಿದ ದೇಶಗಳಲ್ಲೂ ಕೋವಿಡ್ ನಿಂದ ಹೆಚ್ಚು ಸಾವುಗಳಾಗಿವೆ. ಹಾಗಂತ ಅಲ್ಲಿನ ಸರ್ಕಾರಗಳು ವಿಫಲಹೇಳಲು ಆಗಲ್ಲ.
ಈಗಿರುವ ಕ್ರಮಗಳು ಸಾಲುವುದಿಲ್ಲ. ಆರೋಗ್ಯ ಮೂಲಭೂತ ಸೌಕರ್ಯ ಒದಗಿಸಿದ್ದೀವಿ, ರಾತ್ರೋರಾತ್ರಿ ವೈದ್ಯರನ್ನು ಸೃಷ್ಟಿಸಲು ಆಗಲ್ಲ ಎಂದರು.
ಇವತ್ತು ರಾಜ್ಯಪಾಲರ ನೇತೃತ್ವದಲ್ಲಿ ಸಭೆ ಇದ್ದು, ಕಠಿಣ ನಿಯಮಗಳ ಜಾರಿ ಬಗ್ಗೆ ಚರ್ಚಿಸಲಾಗುವುದು.
ಸರ್ಕಾರದ ಜೊತೆ ವಿರೋಧ ಪಕ್ಷಗಳೂ ಬೆಂಬಲಕ್ಕೆ ನಿಲ್ಲಬೇಕು. ಈ ಸಮಯದಲ್ಲಿ ಆರೋಪ ಪ್ರತ್ಯಾರೋಪ ಮಾಡುವುದು ಸರಿಯಲ್ಲ ಎಂದರು.