ಹುಬ್ಬಳ್ಳಿ-ಧಾರವಾಡ prajakiran. com : ಕಳೆದ ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಹಾ ಪೌರ ಹಾಗೂ ಉಪಮಹಾಪೌರರ ಆಯ್ಕೆಗೆ ಕೊನೆಗೂ ದಿನಾಂಕ ನಿಗದಿಯಾಗಿದೆ.
ಮೇ 28ರಂದು ಮೇಯರ್ ಹಾಗೂ ಉಪಮೇಯರ್ ಅಯ್ಕೆ ನಡೆಯಲಿದ್ದು, ಈ ಬಾರಿಯಾದರೂ ಮೇಯರ್ ಪಟ್ಟ ಧಾರವಾಡಕ್ಕೆ ಒಲಿಯುತ್ತಾ ಅಥವಾ ಹುಬ್ಬಳ್ಳಿಯವರ ಕೈ ಮೇಲಾಗುತ್ತದಾ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.
ಈ ಚುನಾವಣೆಯನ್ನ ನಡೆಸಲು ಒತ್ತಾಯಿಸಿ ಕಾಂಗ್ರೆಸ್ ಪಕ್ಷದ ನಾಯಕ ದೀಪಕ ಚಿಂಚೋರೆ ಹಲವು ಬಾರಿ ಹೋರಾಟ ನಡೆಸಿದ್ದರು.
ಹೀಗಾಗಿ ನಿರೀಕ್ಷೆಯಂತೆ ಈ ಕುರಿತು ಅಧಿಕೃತವಾಗಿ ಘೋಷಣೆ ಮಾಡಿ ಬೆಳಗಾವಿ ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದಾರೆ.
21ನೇ ಅವಧಿಗೆ ಮೇಯರ್, ಉಪಮೇಯರ್ ಪಟ್ಟ ಅಲಂಕರಿಸಲು ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಹಿರಿಯ ಸದಸ್ಯರು ಪ್ರಯತ್ನ ನಡೆಸಿದ್ದು, ಮೇ 28ರಂದು ಅದೃಷ್ಟ ಯಾರ ಕೈ ಹಿಡಿಯುತ್ತದೆ ಎಂಬುದನ್ನು ಕಾದು ನೋಡಬೇಕು.