ಹಾಸನ prajakiran.com : ಹಾಸನದಲ್ಲಿ ಭಾನುವಾರ ಮತ್ತೆ 14 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ ಒಬ್ಬ ಕಾನಸ್ಟೇಬಲ್ ಇದ್ದಾರೆ. ಹೀಗಾಗಿ ಅವರೊಂದಿಗೆ ಸಂಪರ್ಕ ಹೊಂದಿದ್ದ ನೂರಕ್ಕೂ ಅಧಿಕ ಪೊಲೀಸರಿಗೆ ಕ್ವಾರಂಟೆನ್ ಮಾಡಲಾಗಿದೆ.
ಇವರು ಬೆಂಗಳೂರಿನಲ್ಲಿ ಡ್ಯೂಟಿ ಮುಗಿಸಿ ಹಾಸನಕ್ಕೆ ಬಂದಿದ್ದರು. ಹಾಸನಕ್ಕೆ ಹೋಗುವ ಮುಂಚೆ 60ಕ್ಕೂ ಹೆಚ್ಚು ಜನರಿಗೆ ಭೇಟಿಯಾಗಿದ್ದರು. ಇದು ಪೊಲೀಸರಿಗೆ ತೀವ್ರ ಆತಂಕ ಸೃಷ್ಟಿಸಿತ್ತು. ಅವರ ಟ್ರಾವೆಲ್ ಹಿಸ್ಟರಿ ಆರೋಗ್ಯ ಇಲಾಖೆಯನ್ನ ಬೆಚ್ಚಿಬೀಳಿಸಿದೆ.
ಸೋಂಕಿತ ಕಾನಸ್ಟೇಬಲ್ ಸಂಪರ್ಕದಲ್ಲಿದ್ದ ಸಿವಿಲ್ ಹಾಗೂ ಕೆಎಸ್ ಆರ್ ಪಿ ಪೊಲೀಸರಿಗೆ ಕ್ವಾರಂಟೆನ್ ಮಾಡಲಾಗಿದೆ.
ಇವರು ತಮಿಳುನಾಡು ಗಡಿಯಲ್ಲಿ ಕೆಲಸ ಮಾಡಿದ್ದರು. ಆನಂತರಅಲ್ಲಿಂದ ವಾಪಾಸ್ ಬಸ್ ನಲ್ಲಿ ಬಂದಿದ್ದರು.
ಅಲ್ಲಿಂದ ಕೆಎಸ್ ಆರ್ ಪಿ ಟ್ರೇನಿಂಗ್ ಸೆಂಟರ್ ಹಾಗೂ ಕಚೇರಿಗೆ ತೆರಳಿದ್ದರು. ಹೀಗಾಗಿ ಇವರೆಡನ್ನು ಸೀಲ್ ಡೌನ್ ಮಾಡಲು ಸೂಚಿಸಲಾಗಿದೆ.
ಅಲ್ಲಿಂದ ಮೂರು ದಿನ ಹಾಸನದಲ್ಲಿದ್ದರು. ಈ ಪೊಲೀಸ್ ಗೆ ಪಾಸಿಟಿವ್ ಬಂದಿದೆ. ಇದರಿಂದಾಗಿ ಪೊಲೀಸರಿಗೆ ನಡುಕ ಉಂಟಾಗಿದೆ.
ಇದೇ ವೇಳೆ ಹಾಸನ ಜಿಲ್ಲೆಯಲ್ಲಿ ಭಾನುವಾರ 14 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಹಾಸನ ನಗರದಲ್ಲಿ ಇಬ್ಬರಿಗೆ ತಗುಲಿದೆ.
ಹೀಗಾಗಿ ಹಾಸನದ ಇಂದಿರಾನಗರ ಬಡಾವಣೆ ಪೊಲೀಸ್ ಸಿಬ್ಬಂದಿಗೆ ಹಾಗೂ ಉತ್ತರ ಬಡಾವಣೆ ಒಂದನೇ ಕ್ರಾಸ್ ನಲ್ಲಿಸ್ಥಳೀಯ ನಿವಾಸಿಗೆ ಸೋಂಕು ವಕ್ಕರಿಸಿಕೊಂಡಿದ್ದರಿಂದ ಈ ಎರಡು ಬಡಾವಣೆಗಳನ್ನು ಸೀಲ್ ಡೌನ್ ಮಾಡಲಾಗಿದೆ ಎಂದು ಹಾಸನ ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದ್ದಾರೆ.
ಈ ಎರಡು ಬಡಾವಣೆಗಳು ಇಂದಿನಿಂದ 28 ದಿನ ಕಂಟೋನ್ ಮೆಂಟ್ ಪ್ರದೇಶಗಳಾಗಿವೆ. ಇಲ್ಲಿ ಯಾರೂ ಓಡಾಡದಂತೆ ಬಫರ್ ಜೋನ್ ಘೋಷಣೆ ಜಿಲ್ಲಾಡಳಿತದಿಂದ ಮಾಡಲಾಗಿದೆ ಎಂದು ವಿವರಿಸಿದರು.