ಧಾರವಾಡ prajakiran. com : ಧಾರವಾಡ ಜಿಲ್ಲೆಯ ಸಾರ್ವಜನಿಕ ಗಣೇಶೋತ್ಸವಕ್ಕೆ ಧ್ವನಿ ವರ್ಧಕ ಹಾಗೂ ಬೆಳಕು ಅಳವಡಿಕೆ ಮಾಡಲು ಅವಕಾಶ ನೀಡಬೇಕು ಎಂದು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಉತ್ತರ ಕರ್ನಾಟಕ ಧ್ವನಿ ಮತ್ತು ಬೆಳಕು ಜನರೇಟರ್ ಹಾಗೂ ಎಲ್ ಇ ಡಿ ವಾಲ್ ಸಂಘದ ಸದಸ್ಯರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಗಣೇಶೋತ್ಸವಕ್ಕೆ ಹಲವಾರು ನಿರ್ಬಂಧಗಳನ್ನು ಹೇರುವುದು ಸರಿಯಲ್ಲ. ಈ ಉತ್ಸವ ಸಂದರ್ಭದಲ್ಲೇ ನಮ್ಮ ಜೀವನ ನಡೆಸಲು ವ್ಯಾಪಾರ ಆಗುತ್ತದೆ.
ಆದರೆ ಸಂಕಷ್ಟದಲ್ಲಿ ಇರುವ ಕಾರ್ಮಿಕರಿಗೆ ಸರ್ಕಾರ ಸ್ಪಂದಿಸಬೇಕು. ಹೊರತು ಹತ್ತು ಹಲವು ನಿರ್ಬಂಧ ಹೇರಬಾರದು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಗಿರೀಶ್ ಹೆಗಡೆ, ಉಪಾಧ್ಯಕ್ಷ ಪ್ರಕಾಶ ಅಸ್ತೋಟಿ, ಪ್ರವೀಣ, ಬಾಸ್ಕೋ, ವಿಜಯ ಪವಾರ, ಪವನ್ ಮೋಳೆ ಸೇರಿದಂತೆ ಅನೇಕರು ಇದ್ದರು.