ಧಾರವಾಡ prajakiran.com : ರಷ್ಯಾ ಉಕ್ರೇನ್ ಮೇಲೆ ದಾಳಿ ಆರಂಭಿಸಿದ ಬೆನ್ನಲ್ಲೇ
ನೂರಾರು ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಅದರಲ್ಲೂ ಧಾರವಾಡ ಜಿಲ್ಲೆಯ ಇಬ್ಬರು ಎಂಬಿಬಿಎಸ್ ವಿದ್ಯಾರ್ಥಿಗಳು ತಮ್ಮ ಕುಟುಂಬದ ಸದಸ್ಯರಿಗೆ ಕರೆ ಮಾಡಿ ವಸ್ತು ಸ್ಥಿತಿ ಕುರಿತು ಗಮನ ಸೆಳೆಯುತ್ತಿದ್ದಾರೆ
ಈ ಪೈಕಿ ಧಾರವಾಡದ ಮೆಹಬೂಬ್ ನಗರ ನಿವಾಸಿ ಫೌಜಿಯಾ ಮುಲ್ಲಾ ಎಂಬಾಕೆ ಕೂಡ ಸಿಲುಕುದ್ದಾಳೆ.
ಆಕೆ ಬೆಳಗ್ಗೆ ವೀಡಿಯೋ ಕಾಲ್ ಮಾಡಿ ಮಾತನಾಡಿದ್ದಳು.ಈಗ ಸಂಪರ್ಕ ಸಿಗದೆ ಆಕೆಯ ಪೋಷಕರು ಕಂಗಲಾಗಿದ್ದಾರೆ.
ಆಕೆಗೆ ಕರೆ ಮಾಡಿ ಮಾತನಾಡುವರೆಗೆ ಸಮಾಧಾನ ಇಲ್ಲ ಎಂದು ಆತಂಕಗೊಂಡಿದ್ದಾರೆ.
ಇದಲ್ಲದೆ, ನವಲಗುಂದ ತಾಲೂಕಿನ ಬಲ್ಲರವಾಡ ಗ್ರಾಮದ ವಿದ್ಯಾರ್ಥಿನಿ ಚೈತ್ರಾ ಕೂಡ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾಳೆ.
.
ಹೀಗಾಗಿ ಆಕೆಯ ಪಾಲಕರು ಕೂಡ ಆತಂಕಗೊಂಡಿದ್ದಾರೆ. ಇಬ್ಬರು ಉಕ್ರೇನ್ ದಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಮಾಡಲು ತೆರಳಿದ್ದಳು.
ಮರಳಿ ಬರಲು ವಿಮಾನ ನಿಲ್ದಾಣದ ಮೇಲೆ ದಾಳಿ ಮಾಡಿದ ಹಿನ್ನೆಲೆ ಪ್ರಯಾಣ ಕೂಡ ರದ್ದಾಗಿದೆ.
ಹೀಗಾಗಿ ನೂರಾರು ಕನ್ನಡಿಗರು ಬಂಕರ್ ನಲ್ಲಿ ಉಳಿದುಕೊಳ್ಳಲು ಉಕ್ರೇನ್ ಸರ್ಕಾರ ವ್ಯವಸ್ಥೆ ಮಾಡಿದ್ದು, ಕುಟುಂಬದ ಸದಸ್ಯರ ಜೊತೆ ನಿರಂತರ ಸಂಪರ್ಕದಲ್ಲಿ ಇರಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಸಂಪರ್ಕ ಸಾಧ್ಯವಾಗದೆ ಪರದಾಡುತ್ತಿದ್ದಾರೆ.