ರಮೇಶ ಜಾರಕಿಹೊಳಿ ಹೆಸರು ಬರೆದಿಟ್ಟು ಸಾಯುವೆ ಎಂದು ಎಚ್ಚರಿಕೆ ನೀಡಿದ ಯುವತಿ…..!
ಬೆಂಗಳೂರು prajakiran.com :
ಸಿಡಿ ಯುವತಿ ಆಡಿಯೋ ವೈರಲ್ ಆದ ಬೆನ್ನಲ್ಲೇ ಈ ಕುರಿತು ಸ್ಪಷ್ಟನೆ ನೀಡಲು ಯುವತಿ ನಾಲ್ಕನೇ ವಿಡಿಯೋ ಬಿಡುಗಡೆ ಮಾಡಿದ್ದಾಳೆ.
ಈ ಸಿಡಿಯಲ್ಲಿ ನಾನು ನನ್ನ ಸಹೋದರನ ಜೊತೆಗೆ ಮಾತನಾಡಿರುವ ಆಡಿಯೋ ಹೇಗೆ ಅವರ ಕೈ ಗೆ ಸಿಕ್ತು ಎಂಬುದು ತಿಳಿಯುತ್ತಿಲ್ಲ.
ಇದನ್ನು ನೋಡಿದರೆ ನನ್ನ ತಂದೆ ತಾಯಿ, ಸಹೋದರರು ಸುರಕ್ಷಿತವಾಗಿ ಇದ್ದಾರೆ ಎಂದು ಅನಿಸುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಜೊತೆಗೆ ಮಾಧ್ಯಮದವರು ಸಂತ್ರಸ್ತರಿಗೆ ನೆರವು ನೀಡಬೇಕು. ಯಾವುದಾದರೂ ಸುದ್ದಿ ಪ್ರಸಾರಕ್ಕಿಂತ ಮುಂಚೆ ಅದರ ಸತ್ಯಾಸತ್ಯತೆ ತಿಳಿಯಬೇಕು.
ರಮೇಶ ಜಾರಕಿಹೊಳಿಯವರ ನಿನ್ನೆ ಹೇಳಿಕೆ ನೋಡಿದರೆ ನಮಗೆ ರಕ್ಷಣೆ ಸಿಗಲ್ಲ ಅನಿಸುತ್ತಿದೆ ಎಂದು ನೋವು ತೋಡಿಕೊಂಡಿದ್ದಾಳೆ.
ಅವರ ಕಿರುಕುಳ ನೋಡಿದರೆ ನಾನು ಅವರ ಹೆಸರು ಬರೆದಿಟ್ಟು ಸಾಯಬೇಕು ಅನಿಸುತ್ತಿದೆ ಎಂದು ಎಚ್ಚರಿಕೆ ನೀಡಿದ್ದಾಳೆ.
ಮಾ. 2 ರ ಆಡಿಯೋ ಇದಾಗಿದ್ದು,
ಮನೆಯವರ ಜೊತೆ ಮಾತನಾಡಿದ ಸಂದರ್ಭದಲ್ಲಿ ನಾನು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹೆಸರು ಪ್ರಸ್ತಾಪಿಸಿದ್ದೆ ಎಂದು ಸ್ಪಷ್ಟನೆ ನೀಡಿದ್ದಾಳೆ.
ಅಂದು ನಾನು ನರೇಶ್ ಅಣ್ಣನ ಮೂಲಕ
ಡಿ.ಕೆ.ಶಿವಕುಮಾರ್ ಅವರನ್ನು ಸಂಪರ್ಕಿಸಲು ಯತ್ನಿಸಿದ್ದೆವು. ಆದರೆ ಅವರ ಭೇಟಿ ಸಾಧ್ಯವಾಗಿಲ್ಲ ಎಂದು ವಿವರಿಸಿದ್ದಾಳೆ.
ನಮ್ಮ ಅಪ್ಪ-ಅಮ್ಮ, ಅಜ್ಜಿ ಹಾಗೂ ಇಬ್ಬರು ಸಹೋದರರು ಎಲ್ಲಿದ್ದಾರೆ ಎಂಬುದು ನನಗೆ ತಿಳಿಯುತ್ತಿಲ್ಲ, ಅವರಿಗೆ ರಕ್ಷಣೆ ಇಲ್ಲ ಎನಿಸುತ್ತಿದೆ. ಅವರು ನನ್ನ ಎದುರು ಇದ್ದರೆ ಮಾತ್ರ ನಾನು ಬಂದು ಎಸ್ ಐಟಿ ಮುಂದೆ ಹೇಳಿಕೆ ನೀಡುತ್ತೇನೆ.
ನನಗೆ ನನ್ನ ಕುಟುಂಬದವರ ರಕ್ಷಣೆ ಮುಖ್ಯ ಎಂದು ತಿಳಿಸಿದ್ದಾರೆ.
ನಾನು ಸುರಕ್ಷಿತವಾಗಿದ್ದು, ನನ್ನನ್ನು ಯಾರೂ ಕಿಡ್ನಾಪ್ ಮಾಡಿಲ್ಲ.
ನಾಳೆ ಎನಾಗಲಿದೆ ಎಂಬುದು ಯಾರಿಗೂ ಗೊತ್ತಿಲ್ಲ. ತಕ್ಷಣ ಅಪ್ಪ-ಅಮ್ಮ, ಅಜ್ಜಿ ಸಹೋದರರನ್ನು ಬೆಂಗಳೂರಿಗೆ ಕರೆದುಕೊಂಡು ಬಂದು ರಕ್ಷಣೆ ನೀಡಿ ಎಂದು ಎಸ್ ಐಟಿಗೆ ನೋಂದ ಯುವತಿ ಮನವಿ ಮಾಡಿದ್ದಾಳೆ.