ವಿಜಯನಗರ ಪ್ರಜಾಕಿರಣ. ಕಾಮ್ : ಮುಳುಗುತ್ತಿದ್ದ ತಮ್ಮನನ್ನು ರಕ್ಷಿಸಲು ತೆರಳಿದ್ದ ನಾಲ್ಕು ಜನ ಮಕ್ಕಳು ನೀರುಪಾಲಾದ ಹೃದಯವಿದ್ರಾವಕ ಘಟನೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಚನ್ನಹಳ್ಳಿ ತಾಂಡಾದಲ್ಲಿ ನಡೆದಿದೆ.
ಮುಳುಗುತ್ತಿರುವ ತಮ್ಮನನ್ನು ರಕ್ಷಿಸಲು ಹೋದ ಮೂರು ಜನ ಅಕ್ಕಂದಿರೂ ಸಹ ನೀರು ಪಾಲಾಗಿದ್ದಾರೆ
ಅಭಿ ವೀರ್ಯಾ ನಾಯ್ಕ (13), ಅಶ್ವಿನಿ (14), ಕಾವೇರಿ (18) ಅಪೂರ್ವಾ (18) ಸಾವನ್ನಪ್ಪಿದ ಒಂದೇ ಕುಟುಂಬದ ಮಕ್ಕಳಾಗಿದ್ದಾರೆ.
ಮೊದಲು ಅಭಿ ನೀರಿನಲ್ಲಿ ಮುಳುಗುತ್ತಿದ್ದ. ಈತನ ರಕ್ಷಣೆಗೆ ಒಬ್ಬರಾದಂತೆ ಒಬ್ಬರು ಹೋಗಿ ನೀರು ಪಾಲಾಗಿದ್ದಾರೆ. ಎಲ್ಲರ ಮೃತದೇಹಗಳೂ ಪತ್ತೆಯಾಗಿವೆ.
ಇತ್ತೀಚೆಗೆ ನಿರಂತರ ಮಳೆಯಿಂದಾಗಿ ಕೆರೆ, ಹಳ್ಳ ಹಾಗೂ ಹೊಂಡಗಳು ತುಂಬಿವೆ. ಹೀಗಾಗಿ ಭರ್ತಿ ಆಗಿರೋ ಹೊಂಡದಲ್ಲಿ ಮಕ್ಕಳು ಮುಳುಗಿ ಸಾವನಪ್ಪಿದ್ದಾರೆ.
ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.