ಧಾರವಾಡ Prajakiran.com : ದೆಹಲಿಯಲ್ಲಿ ರೈತರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಹಾಗೂ ಕೃಷಿ ಮಸೂದೆಯನ್ನು ವಾಪಸ್ ಪಡೆಯಲು ಆಗ್ರಹಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ರೈತ ಹಿತರಕ್ಷಣಾ ಪರಿವಾರದ ಸದಸ್ಯರು ಅನಿರ್ದಿಷ್ಟ ಸರಣಿ ಸತ್ಯಾಗ್ರಹ ಇಂದು ನಲ್ವತ್ತು ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು ಇಂದು ಹೋರಾಟದ ಅಂಗವಾಗಿ ಸರ್ಕಾರದ ವಿರುದ್ಧ ಘೋಷಣೆ ಕೂಗುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿ ದಿನವು ಮೌನವಾಗಿ ಸರ್ಕಾರದ ವಿರುದ್ಧ ಅನಿರ್ದಿಷ್ಟ ಸತ್ಯಾಗ್ರಹ ಹಮ್ಮಿಕೊಂಡ ರೈತ ಹಿತರಕ್ಷಣಾ ಪರಿವಾರದ ಸದಸ್ಯರು ಈ ಹಿಂದೆ ಡೋಳ್ಳು ಬಾರಿಸಿ ಪ್ರತಿಭಟನೆ ನಡೆಸಿದರು,.
ಗಾಂಧಿ ಪ್ರತಿಮೆ ಸ್ವಚ್ಚತಾ ಕಾರ್ಯ ಮಾಡಿದರು,.
ಅದರಂತೆ ವಿಭಿನ್ನವಾಗಿ ಈ ಪ್ರತಿಭಟನೆ ನಡೆಸಲಾಗುತ್ತಿದೆ. ಶಾಂತವಾಗಿ ರೈತ ವಿರೋಧಿ ಕಾನೂನು ವಾಪಸ್ ಪಡೆಯಲು ಆಗ್ರಹಿಸಲಾಗುತ್ತಿದೆ.
ಸರ್ಕಾರ ಹೋರಾಟವನ್ನು ನಿರ್ಲಕ್ಷ್ಯ ಧೋರಣೆ ತಾಳಿದ ಹಿನ್ನೆಲೆಯಲ್ಲಿ ಅಸಹಕಾರ ಚಳವಳಿ ಅನಿವಾರ್ಯ ಎಂದು ಹೋರಾಟಗಾರರು ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಎಚ್ಚರಿಸಿದರು.
ಈ ಹೋರಾಟದಲ್ಲಿ ಕೆಪಿಸಿಸಿ ಮಾದ್ಯಮ ವಿಶ್ಲೇಷಕ ಪಿ ಎಚ್ ನೀರಲಕೇರಿ, ಶ್ರೀಶೈಲಗೌಡ ಕಮತರ, ಶಿವಪ್ಪ ಯಲ್ಲಪ್ಪ ಗುಂಡಗಾವಿ, ಬಸವರಾಜ ಕುಬ್ಯಾಳ, ಕರಿಯಪ್ಪ ಶಿರಹಟ್ಟಿ, ವಾಯ್.ಎಮ್. ದಾನಪ್ಪನವರ ಸೇರಿದಂತೆ ಹಲವರು ಹೋರಾಟದಲ್ಲಿ ಭಾಗವಹಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು