ರಾಜ್ಯ

ಧಾರವಾಡದ ರೈತನ ನಂಬಿಸಿ ಜಮೀನು ಖರೀದಿ ನೊಂದಣಿ ಮಾಡಿಸಿ ವಂಚನೆ

ಧಾರವಾಡ prajakiran. com : ರೈತರೊಬ್ಬರ ಜಮೀನನ್ನು ನಂಬಿಸಿ ಖರೀದಿ ನೊಂದಣಿ ಮಾಡಿಸಿ ವಂಚಿಸಿದ ಪ್ರಕರಣ ಧಾರವಾಡ ತಾಲ್ಲೂಕಿನ ಗರಗ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ತಾಲ್ಲೂಕಿನ ಶಿಂಗನಹಳ್ಳಿ ಗ್ರಾಮದ ಮಹದೇವ ಅಡಿವೆಪ್ಪ ದಂಡಿನ ಮತ್ತು ಇತರ ಇಬ್ಬರು ‌ಸೇರಿ‌ ವಂಚಿಸಿದವರು. ಹಂಗರಕಿ ಗ್ರಾಮದ ನಾಗಪ್ಪ ಭೀಮಪ್ಪ ಸೊಗಲದ ಎಂಬುವರು ವಂಚನೆಗೊಳಗಾದವರು.

ಸೊಗಲದ ಅವರ 15 ಎಕರೆ ಜಮೀನನಲ್ಲಿ ಪವನ ವಿದ್ಯುತ್ ಅಳವಡಿಸಲು ಒಪ್ಪಿಗೆ ಪಡೆದು ಈ ವ್ಯವಹಾರಕ್ಕೆ ಸಂಬಂಧಿಸಿದಂತೆ ಕರಾರು ಪತ್ರ ನೋಂದಣಿ ಮಾಡಿಸುವುದಾಗಿ ಹೇಳಿ ಮುಂಬೈ ಮೂಲದ ವ್ಯಕ್ತಿಯೊಬ್ಬರಿಗೆ ಖರೀದಿ ನೋಂದಣಿ ಮಾಡಿಸಿ ವಂಚಿಸಿದ್ದಾರೆ.

ಬಳಿಕ ಈ ವಿಷಯ ರೈತ ನಾಗಪ್ಪ ಸೊಗಲದಗೆ ಗೊತ್ತಾಗಿ ಮಹದೇವ ದಂಡಿನ ಅವರಿಗೆ ವಿಚಾರಿಸಿದಾಗ ತಮಗೆ ಏನೂ
ಗೊತ್ತಿಲ್ಲ ಎಂದು ಹೇಳಿ ಕಳಿಸಿದ್ದಾರೆ.

ಇದರಿಂದ ಬೇಸತ್ತ ರೈತ ನಾಗಪ್ಪ ಗರಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ. 

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *