ಧಾರವಾಡ prajakiran. com : ರೈತರೊಬ್ಬರ ಜಮೀನನ್ನು ನಂಬಿಸಿ ಖರೀದಿ ನೊಂದಣಿ ಮಾಡಿಸಿ ವಂಚಿಸಿದ ಪ್ರಕರಣ ಧಾರವಾಡ ತಾಲ್ಲೂಕಿನ ಗರಗ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ತಾಲ್ಲೂಕಿನ ಶಿಂಗನಹಳ್ಳಿ ಗ್ರಾಮದ ಮಹದೇವ ಅಡಿವೆಪ್ಪ ದಂಡಿನ ಮತ್ತು ಇತರ ಇಬ್ಬರು ಸೇರಿ ವಂಚಿಸಿದವರು. ಹಂಗರಕಿ ಗ್ರಾಮದ ನಾಗಪ್ಪ ಭೀಮಪ್ಪ ಸೊಗಲದ ಎಂಬುವರು ವಂಚನೆಗೊಳಗಾದವರು.
ಸೊಗಲದ ಅವರ 15 ಎಕರೆ ಜಮೀನನಲ್ಲಿ ಪವನ ವಿದ್ಯುತ್ ಅಳವಡಿಸಲು ಒಪ್ಪಿಗೆ ಪಡೆದು ಈ ವ್ಯವಹಾರಕ್ಕೆ ಸಂಬಂಧಿಸಿದಂತೆ ಕರಾರು ಪತ್ರ ನೋಂದಣಿ ಮಾಡಿಸುವುದಾಗಿ ಹೇಳಿ ಮುಂಬೈ ಮೂಲದ ವ್ಯಕ್ತಿಯೊಬ್ಬರಿಗೆ ಖರೀದಿ ನೋಂದಣಿ ಮಾಡಿಸಿ ವಂಚಿಸಿದ್ದಾರೆ.
ಬಳಿಕ ಈ ವಿಷಯ ರೈತ ನಾಗಪ್ಪ ಸೊಗಲದಗೆ ಗೊತ್ತಾಗಿ ಮಹದೇವ ದಂಡಿನ ಅವರಿಗೆ ವಿಚಾರಿಸಿದಾಗ ತಮಗೆ ಏನೂ
ಗೊತ್ತಿಲ್ಲ ಎಂದು ಹೇಳಿ ಕಳಿಸಿದ್ದಾರೆ.
ಇದರಿಂದ ಬೇಸತ್ತ ರೈತ ನಾಗಪ್ಪ ಗರಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.