ಧಾರವಾಡ prajakiran.com : ಧಾರವಾಡ ಜಿಲ್ಲೆಯನ್ನು ಕರೋನಾ ಮಹಾಮಾರಿ ಬೆಂಬಿಡದೆ ಕಾಡುತ್ತಿದೆ.
ಅದರಲ್ಲೂ ದಿನಕ್ಕೆ ಸಾವಿರ ಗಡಿ ಸಮೀಪಿಸುತ್ತಿರುವ ಕರೋನಾ ಪಾಸಿಟಿವ್ ಪ್ರಕರಣಗಳು ಜನತೆಯನ್ನು ಆತಂಕಕ್ಕೆ ಸಿಲುಕಿಸಿವೆ.
ಕಳೆದ ಒಂದು ವಾರದ ಅವಧಿಯಲ್ಲಿ ಕೊರೋನಾದಿಂದ ಅರಣ್ಯ ಇಲಾಖೆಯು 8 ಜನ ಹಸಿರು ಯೋಧರನ್ನು ಕಳೆದುಕೊಂಡಿದೆ ಎಂದು ಡಿಸಿಎಫ್ ಯಶಪಾಲ್ ಕ್ಷಿರಸಾಗರ ಕಂಬನಿ ಮಿಡಿದು, ತಮ್ಮ ನೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಅಲ್ಲದೆ, ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಆ ಕುಟುಂಬಗಳಿಗೆ ಮತ್ತು ಸ್ನೇಹಿತರಿಗೆ ನಮ್ಮ ಆಳವಾದ ಸಂತಾಪ. ದೇವರು ನಿಮ್ಮ ಆತ್ಮಕ್ಕೆ ಚಿರ ಶಾಂತಿ ನೀಡಲಿ.
ನಿಮ್ಮ ನೋವಿನಲ್ಲಿ ಅರಣ್ಯ ಇಲಾಖೆಯು ಭಾಗಿಯಾಗಿದೆ. ನಿವೇಲ್ಲಾ
ಧೈರ್ಯದಿಂದ ಬದುಕು ಸಾಗಿಸಿ ಎಂದು ಸಂತೈಸಿದ್ದಾರೆ.
ಇದರಿಂದಾಗಿ ಧಾರವಾಡ ವಿಭಾಗದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಬೆಚ್ಚಿಬಿದ್ದಿದ್ದಾರೆ.