ಗುವಾಹಟಿ prajakiran.com : ಜೈಲು ಸಿಬ್ಬಂದಿಗೆ ಖಾರದ ಪುಡಿ ಎರಚಿ 7 ಖೈದಿಗಳು ಎಸ್ಕೇಪ್ ಆಗಿರುವ ಘಟನೆ ಅರುಣಾಚಲ ಪ್ರದೇಶದ ಈಸ್ಟ್ ಸಯಾಂಗ್ ಜಿಲ್ಲೆಯಲ್ಲಿ ನಡೆದಿದೆ.
ಕೈದಿಗಳು ಪರಾರಿಯಾಗುವ ವೇಳೆ 5 ಮಂದಿ ರಕ್ಷಣಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದು, ಒಬ್ಬರಿಗೆ ಗಂಭೀರ ಗಾಯವಾಗಿದೆ.
ಊಟಕ್ಕೆಂದು ಸೆಲ್ಗಳನ್ನು ತೆರೆದಿದ್ದಾಗ ಈ ಘಟನೆ ನಡೆದಿದೆ. ಪರಾರಿಯಾಗಲು ಸಂಚು ರೂಪಿಸಿದ್ದ ಏಳು ಖೈದಿಗಳು ಕೂಡ ಒಂದೇ ಕಡೆ ಸೇರಿದ್ದರು.
ನಂತರ ತಮ್ಮ ಪ್ಲಾನ್ ನಂತೆಯೇ ಉಪ್ಪು ಮಿಶ್ರಿತ ಖಾರದ ಪುಡಿ ಎರಚಿ, ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.
ಪರಾರಿಯಾಗಿರು ಕೈದಿಗಳನ್ನು ಹಿಡಿಯಲು ವಿಶೇಷ ಪೊಲೀಸ್ ತಂಡವನ್ನು ರಚಿಸಿ, ಕಾರ್ಯಾಚರಣೆ ಆರಂಭವಾಗಿದೆ.