ಹುಬ್ಬಳ್ಳಿ Prajakiran.com : ಸೋಮವಾರದಿಂದ 16 ಜಿಲ್ಲೆಗಳನ್ನು ಅನ್ಲಾಕ್ ಮಾಡಿದ ರಾಜ್ಯ ಸರ್ಕಾರ, ಶೇ. 4.01 ರಷ್ಟು ಪಾಸಿಟಿವ್ ದರ ಇರುವ ಧಾರವಾಡ ಜಿಲ್ಲೆಯನ್ನು ಅನ್ಲಾಕ್ ಮಾಡುವಂತೆ ವರ್ತಕರು ಆಗ್ರಹಿಸಿದ್ದಾರೆ.
ಧಾರವಾಡ ಜಿಲ್ಲೆಯನ್ನು ಅನ್ಲಾಕ್ ಮಾಡಿ ಎಂದು ವರ್ತಕರ ಸಂಘ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಮನವಿ ಸಲ್ಲಿಸಿದರು.
ವರ್ತಕರ ಬೇಡಿಕೆಗೆ ಸ್ಪಂದಿಸಿದ ಶೆಟ್ಟರ್ ಸಿಎಂ ಜೊತೆ ಮಾತನಾಡುವುದಾಗಿ ಭರವಸೆ ನೀಡಿದರು.
ಸಿಎಂ ಗೆ ಕರೆ ಮಾಡಿ ವಾಸ್ತವ ಸ್ಥಿತಿಯನ್ನು ಹೇಳುತ್ತೇನೆ. ಈಗಾಗಲೇ ಆರೋಗ್ಯ ಸಚಿವ ಸುಧಾಕರ್ ಜೊತೆಯೂ ಚರ್ಚೆ ಮಾಡಿದ್ದೇನೆ.
ಮಧ್ಯಾಹ್ನದ ನಂತರ ಡಿಸಿ ಮತ್ತು ಆರೋಗ್ಯ ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇನೆ.
ಸರ್ಕಾರ 10 ದಿನಗಳ ಪಾಸಿಟಿವಿಟಿ ರೇಟಿಂಗ್ ತೆಗೆದುಕೊಂಡಿದ್ದೆ ಅನ್ಲಾಕ್ ಆಗದಿರಲು ಕಾರಣ.
ಆದಷ್ಟು ಬೇಗ ಅನ್ ಲಾಕ್ ಮಾಡಿಸಲಾಗುವುದು ಎಂದು ಭರವಸೆ ನೀಡಿದರು.