ಧಾರವಾಡ prajakiran.com : ಧಾರವಾಡ ಜಿಲ್ಲಾಸ್ಪತ್ರೆ ಸಿಬ್ಬಂದಿ ಡಿ ದರ್ಜೆ ನೌಕರ ಮಾರುತಿ ಕಟ್ಟಿಮನಿ ಕೋವಿಡ್ ಗೆ ಬಲಿಯಾಗಿದ್ದಾರೆ.
ಅವರು ಕಳೆದ ಹತ್ತು ದಿನಗಳಿಂದ ಕರೋನಾದಿಂದ ಬಳಲುತ್ತಿದ್ದರು.
ಹೀಗಾಗಿ ಅವರಿಗೆ ಹೆಚ್ಚಿನ ಚಿಕಿತ್ಸೆ ಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಅವರು ಚಿಕಿತ್ಸೆ ಫಲಿಸದೆ ಗುರುವಾರ ಬೆಳಗಿನ ಜಾವ ಇಹಲೋಕ ತ್ಯಜಿಸಿದರು.
ಅವರ ಅಗಲಿಕೆ ಜಿಲ್ಲಾಸ್ಪತ್ರೆ ಸಿಬ್ಬಂದಿ ಹಾಗೂ ಕುಟುಂಬದ ಸದಸ್ಯರಿಗೆ ನೋವು ತರಿಸಿದೆ.
ಕರೋನಾ ವಾರಿಯರ್ ಒಬ್ಬ ಕರೋನಾ ಪಾಸಿಟಿವ್ ಆಗಿ ಸಾವನ್ನಪ್ಪಿರುವುದು ವಿಧಿಯ ಆಟವಲ್ಲದೆ ಬೇರೆನೂ ಅಲ್ಲ ಎಂಬುದು ವಾಸ್ತವ ಸತ್ಯ.