ನವದೆಹಲಿ prajakiran.com : ರಾಷ್ಟ್ರರಾಜಧಾನಿಯಲ್ಲಿ ಸರಣಿ ಲಾಕ್ಡೌನ್ ನಂತರ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡು ಬಂದಿದ್ದು, ಈ ನಿಟ್ಟಿನಲ್ಲಿ ಲಾಕ್ಡೌನ್ ನಿರ್ಬಂಧನೆಗಳನ್ನು ರಾಜ್ಯ ಸರ್ಕಾರ ಸಡಿಲಗೊಳಿಸಿದೆ.
ರಾಜ್ಯದಲ್ಲಿ ರೆಸ್ಟೋರೆಂಟ್ಗಳಿಗೆ ಶೇ.50ರಷ್ಟು ಜನರನ್ನು ಮಾತ್ರ ಒಳಗೊಳ್ಳುವಂತೆ ಅನುಮತಿ ನೀಡಲಾಗಿದೆ.
ಮಾರುಕಟ್ಟೆಗಳು ಬೆಳಗ್ಗೆ 10ರಿಂದ ರಾತ್ರಿ 8ರ ವರೆಗೆ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಿದೆ.
ಶಾಲಾ ಕಾಲೇಜುಗಳು, ಜಿಮ್, ಸ್ಪಾ ಗಳು ಮುಚ್ಚಲಾಗುತ್ತದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಧಾರ್ಮಿಕ ಕ್ಷೇತ್ರಗಳು, ಥಿಯೇಟರ್, ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ.
ಒಂದು ವಾರದ ಬಳಿಕ ಸೋಂಕಿನ ಪ್ರಕರಣ ಹೆಚ್ಚಾದರೆ ಮತ್ತೆ ಕಠಿಣ ನಿರ್ಬಂಧ ಹೇರಲಾಗುತ್ತದೆ ಎಂದು ಹೇಳಿದ್ದಾರೆ.