ಬೆಂಗಳೂರು prajakiran.com : ಪುಲಕೇಶಿ ನಗರ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿಯವರನ್ನು ರಾಜಕೀಯವಾಗಿ ಹಣಿಯಲು ಆ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬಿಬಿಎಂಪಿ ನಾಲ್ವರು ಕಾಂಗ್ರೆಸ್ ಸದಸ್ಯರು ಮೌನವಹಿಸಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
ಘಟನೆ ನಂತರಅವರ ನೆರವಿಗೆ ಧಾವಿಸದೆ ಮೌನವಹಿಸಿರುವುದು ಕೈ ಒಳಗಿನ ರಾಜಕಾರಣ ಬಯಲಿಗೆ ಬಂದಿದೆ. ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು. ಇದರಿಂದ ಮೂಲ ವಲಸೆ ತಿಕ್ಕಾಟ ನಡೆದಿತ್ತು.
ಈ ಸಂಬಂಧ ಕೆಪಿಸಿಸಿ ಅಧ್ಯಕ್ಷರಿಗೆ ಕೂಡ ದೂರು ನೀಡಿದ್ದರು. ಕಾಂಗ್ರೆಸ್ ನಲ್ಲಿ ಒಂದು ವರ್ಗಅವರನ್ನು ಮೂಲೆಗುಂಪು ಮಾಡಿ, ಬಿ. ಪ್ರಸನ್ನಕುಮಾರ್ ಅವರನ್ನು ಮರಳಿ ಪಕ್ಷಕ್ಕೆ ಕರೆ ತರಲು ಗ್ರೀನ್ ಸಿಗ್ನಲ್ ನೀಡಲಾಗಿತ್ತು.
ಇದರಿಂದ ಕಾಂಗ್ರೆಸ್ ಶಾಸಕಅಖಂಡ ಶ್ರೀನಿವಾಸಮೂರ್ತಿ ವಿಚಲಿತರಾಗಿದ್ದರು. ಆದರೆ ಅವರ ನೆರವಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಧಾವಿಸಿದ್ದಾರೆ ಎನ್ನಲಾಗಿದೆ.