ಬೆಂಗಳೂರು prajakiran.com : ನಟ ದರ್ಶನ್ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಠಿಸಿ 25 ಕೋಟಿ ರೂ. ಸಾಲಕ್ಕಾಗಿ ಅರ್ಜಿ ಸಲ್ಲಿಸಿ, ವಂಚನೆಗೆ ಯತ್ನಿಸಿದ ನಕಲಿ ಮಹಿಳಾ ಅಧಿಕಾರಿ ಸೇರಿ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಕಲಿ ಬ್ಯಾಂಕ್ ಅಧಿಕಾರಿ ಅರುಣಕುಮಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ತೀವ್ರಗೊಳಿಸಿದ್ದಾರೆ.
ಈ ಬಗ್ಗೆ ನಟ ದರ್ಶನ್ ಮಾತನಾಡಿ, ಈ ಫೋರ್ಜರಿ ಬಗ್ಗೆ ನನಗೂ ಒಂದು ತಿಂಗಳ ಹಿಂದಷ್ಟೇ ಮಾಹಿತಿ ಸಿಕ್ಕಿದೆ.
ಫೋರ್ಜರಿ ಮಾಡಿದವರೇ ಎಲ್ಲ ವಿಷಯ ಬಾಯ್ಬಿಡಬೇಕು ಎಂದು ಹೇಳಿದ್ದಾರೆ.
ಇನ್ನೂ ಈ ಪ್ರಕರಣದಲ್ಲಿ ದರ್ಶನ್ ಆಪ್ತರ ಕೈವಾಡವೇ ಇರಬಹುದು ಎಂದ ಅನುಮಾನ ವ್ಯಕ್ತವಾಗಿದೆ.
ಈ ಎಲ್ಲ ಊಹಾಪೋಹಗಳಿಗೂ ಉತ್ತರ ಸಿಗಬೇಕಾಗಿದೆ.
ರಾಬರ್ಟ್ ಸಿನಿಮಾ ನಿರ್ಮಾಣದ ನಿರ್ಮಾಪಕ ಉಮಾಪತಿ ವಿರುದ್ದ ಅನುಮಾನ ಮೂಡಿಸಿದ್ದು, ನಟ್ ದರ್ಶನ ಆಪ್ತ ಹರ್ಷ ನೀಡಿದ ದೂರಿನ ಮೇಲೆ ಪೊಲೀಸರು ತನಿಖೆ ನಡೆಸಲು ಮುಂದಾಗಿದ್ದಾರೆ
ಆದರೆ ನಿರ್ಮಾಪಕ ಉಮಾಪತಿ ನಟ ದರ್ಶನ್ ಗೆ ಈ ಬಗ್ಗೆ ಮಾಹಿತಿ ನೀಡಿದ್ದು ನಾನೆ, ನಾನು ಜೂನ್ ತಿಂಗಳಲ್ಲಿಯೇ ಈ ಕುರಿತು ಪ್ರಕರಣ ದಾಖಲಿಸಿದ್ದೇನೆ.
ಜೊತೆಗೆ ನಟ ದರ್ಶನ್ ಗೆ ವಾಟ್ಸ್ ಅಪ್ ಚಾಟ್ ಮೊಬೈಲ್ ಕರೆ ಮಾಹಿತಿ ನೀಡಿದ್ದು, ಈ ಬಗ್ಗೆ ನಾನು ಈಗಲೇ ಎನೂ ಹೇಳಲ್ಲ. ತನಿಖೆ ನಂತರ ಸತ್ಯಾಂಶ ಹೊರಬರಲಿದೆ ಎಂದು ಹೇಳಿದ್ದಾರೆ.