ಧಾರವಾಡ ಪ್ರಜಾಕಿರಣ.ಕಾಮ್ : ನಿಯಂತ್ರಣ ತಪ್ಪಿ ಕಾರು ರಸ್ತೆ ಬದಿಯ ಡಿವೈಡರ್ ಗೆ ಡಿಕ್ಕಿ ಹೊಡೆದು ಕಾರು ಪಲ್ಟಿಯಾಗಿ ಇಬ್ಬರು ಸ್ಥಳದಲ್ಲಿ ಮೃತಪಟ್ಟು, ಓರ್ವ ತೀವ್ರವಾಗಿ ಗಾಯಗೊಂಡ ಘಟನೆ ತಾಲೂಕಿನ
ಕೋಟೂರ ಕ್ರಾಸ್ ಬಳಿ ನಿನ್ನೆ ರಾತ್ರಿ ಸಂಭವಿಸಿದೆ.
ಕಾರಿನಲ್ಲಿದ್ದ ವಿನಯ ದೊಡ್ಡವೀರಯ್ಯ ಹಿರೇಮಠ (37) ಮತ್ತು ಸಂದೀಪ ಕುರವತ್ತೆಪ್ಪ (34) ಮೃತರು.
ಕಿರಣ ಪ್ಯಾಟಿಮಠ ಘಟನೆಯಲ್ಲಿ ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಕಾರಿನಲ್ಲಿ ಪ್ರಯಾಣಿಸುತ್ತಿದ್ದಮೂವರು ಧಾರವಾಡದ ಚನ್ನಬಸವೇಶ್ವರ ನಗರದ ನಿವಾಸಿಗಳು.
ಮೃತಪಟ್ಟಿರುವ ವಿನಯ ಹಿರೇಮಠ ಅವರು ಬರೋಡಾ ಬ್ಯಾಂಕ್ ನ ಛಬ್ಬಿ ಶಾಖೆಯ ಮ್ಯಾನೇಜರ ಎಂದು ಗೊತ್ತಾಗಿದೆ.
ಘಟನಾ ಸ್ಥಳಕ್ಕೆ ಸಿಪಿಐ ಸಮೀರ ಮುಲ್ಲಾ ಮತ್ತು ಪಿಎಸ್ ಐ ಪ್ರಕಾಶ ಡಿ. ಭೇಟಿ ನೀಡಿದ್ದರು.
ಭೀಕರ ಅಪಘಾತದ
ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಕುರಿತು ಧಾರವಾಡದ ಗರಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.