ಧಾರವಾಡದಲ್ಲಿ ಜಯ ಕರ್ನಾಟಕ ಸಂಘಟನೆಯ ವಿಭಿನ್ನ ಪ್ರತಿಭಟನೆ
ಧಾರವಾಡ ಪ್ರಜಾಕಿರಣ.ಕಾಮ್ : ಕಾವೇರಿ ನದಿ ನೀರನ್ನ ತಮಿಳುನಾಡಿಗೆ ಯಾವುದೇ ಕಾರಣಕ್ಕೂ ಹರಿಸಬಾರದೆಂದು ಆಗ್ರಹಿಸಿ ಕರೆದಿದ್ದ ಕರ್ನಾಟಕ ಬಂದ್ಗೆ ಬೆಂಬಲಿಸಿ ಧಾರವಾಡದಲ್ಲಿ ಜಯ ಕರ್ನಾಟಕ ಸಂಘಟನೆ ವಿಭಿನ್ನ ಹೋರಾಟ ನಡೆಸಿ ಎಲ್ಲರ ಗಮನ ಸೆಳೆಯಿತು.
ರಕ್ತದಲ್ಲಿ “ಕಾವೇರಿ ನಮ್ಮದು” ಎಂದು ಬರೆಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
‘ರಕ್ತ ಕೊಟ್ಟೇವು, ಆದರೆ ನೀರು ಬಿಡೆವು’ ಎಂಬ ಸಂದೇಶ ರವಾನಿಸಿದರು.
ಜಯ ಕರ್ನಾಟಕ ಸಂಘಟನೆಯ
ಜಿಲ್ಲಾಧ್ಯಕ್ಷ ಸುಧೀರ್ ಎಂ ಮುಧೋಳ್ ನೇತೃತ್ವದಲ್ಲಿ ಹೋರಾಟ ಮಾಡಲಾಯಿತು.
ಈ ಸಂದರ್ಭದಲ್ಲಿ ಪೊಲೀಸರು ಹಲವರನ್ನು ಬಂಧಿಸಿ ಆನಂತರ ಬಿಡುಗಡೆ ಗೊಳಿಸಿದ್ದರು.