ರಾಜ್ಯ

ಧಾರವಾಡ ಜಿಲ್ಲೆ ಬಿಜೆಪಿಯಲ್ಲಿ ಭುಗಿಲೇಳುತ್ತಾ ಭಿನ್ನಮತ…..!?

ಬಿಜೆಪಿ ಮೊದಲ ಪಟ್ಟಿ ಬಿಡುಗಡೆ 189 ಅಭ್ಯರ್ಥಿಗಳ ಹೆಸರು ಅಂತಿಮ

ಧಾರವಾಡ ಪ್ರಜಾಕಿರಣ.ಕಾಮ್ : ಕರ್ನಾಟಕದಲ್ಲಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಲು ಹವಣಿಸುತ್ತಿರುವ ರಾಷ್ಟ್ರೀಯ ಪಕ್ಷ ಬಿಜೆಪಿ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.

ಅಳೆದು ತೂಗಿ ಹೆಸರು ಪ್ರಕಟಿಸಿದರೂ ಪಕ್ಷದಲ್ಲಿ ಬಂಡಾಯ ಭುಗಿಲೇಳುವ ಸಾಧ್ಯತೆ ಇದೆ.

ಧಾರವಾಡ ಜಿಲ್ಲೆಯ ಕುಂದಗೋಳಕ್ಕೆ ಎಂ.ಆರ್. ಪಾಟೀಲ ಹೆಸರು ಅಂತಿಮ ಗೊಂಡಿದ್ದರಿಂದ ಎಸ್. ಐ ಚಿಕ್ಕನಗೌಡರ ನಡೆ ಕುತೂಹಲ ಕೆರಳಿಸಿದೆ.

ಅದೇ ರೀತಿ ಕಲಘಟಗಿ ಕ್ಷೇತ್ರದ ಅಭ್ಯರ್ಥಿಯಾಗಿ ನಾಗರಾಜ ಛಬ್ಬಿ ಹೆಸರು ಪ್ರಕಟವಾಗಿದ್ದರಿಂದ ಹತ್ತು ಹಲವು ಬಿಜೆಪಿ ಆಕಾಂಕ್ಷಿಗಳ ನಡೆ ತೀವ್ರ ಕುತೂಹಲ ಕೆರಳಿಸಿದೆ.

ಇನ್ನು ಧಾರವಾಡ ಗ್ರಾಮೀಣ ಹಾಲಿ ಶಾಸಕ‌ ಅಮೃತ ದೇಸಾಯಿಗೆ ಮಣೆ ಹಾಕಿದ್ದರಿಂದ ಬಂಡಾಯದ ಬೇಗುದಿ ಪುಟಿದೇಳುವ ಸಾಧ್ಯತೆ ದಟ್ಟವಾಗಿದೆ.

ಈಗಾಗಲೇ ಕ್ಷೇತ್ರದ ವ್ಯಾಪ್ತಿಯಲ್ಲಿ ಒಂದು ಸುತ್ತಿನ ಮಿಂಚಿನ ಸಂಚಾರ ಕೈಗೊಂಡಿರುವ ಬಡವರ ಮನೆ ಮಗ ಬಸವರಾಜ ಕೊರವರ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಹಾಲಿ ಹಾಗೂ ಮಾಜಿಗೆ ಟಕ್ಕರ್ ನೀಡಲು ಭರ್ಜರಿ ಸಿದ್ದತೆ ನಡೆಸಿದ್ದಾರೆ.

ಇನ್ನು ತವನಪ್ಪ ಅಷ್ಟಗಿ, ಸೀಮಾ ಮಸೂತಿ ಸವಿತಾ ಅಮರಶೆಟ್ಟಿ ಅವರ ನಡೆ ಯಾವ ರೀತಿ ಇರುತ್ತದೆ ಎಂಬುದು ಬರುವ ದಿನಗಳಲ್ಲಿ ಕಾದು ನೋಡಬೇಕು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *